ನಮ್ಮ ಬೋರ್ಡ್ ಆಫ್ ಡೈರೆಕ್ಟರ್ಸ್ ಗಳ ಸಹಕಾರಿ ನಿಷ್ಣತೆ ಮತ್ತು ದೂರದೃಷ್ಟಿಯು ನಮ್ಮನ್ನು ನಮಗೆ ತಿಳಿಯದಿರುವ ಸಾಧನೆಗೆ ತೆರೆದುಕೊಳ್ಳುವಂತೆ ಪ್ರೇರೇಪಿಸಿ ಅವರನ್ನು ಸಭಲರನ್ನಾಗಿಸುವ ಮೂಲಕ ಜನರು ಅವರ ಗುರಿಯನ್ನು ಸಾಧಿಸುವಂತೆ ಮಾಡಿದೆ.
ડો ಡಾ. ಅನೀಶ್ ಷಾ ಅವರು ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಆಗಿದ್ದಾರೆ. ಇವರು 2014 ರಲ್ಲಿ ಗ್ರೂಪ್ ಪ್ರೆಸಿಡೆಂಟ್ (ಸ್ಟ್ರಾಟಜಿ) ಆಗಿ ಮಹೀಂದ್ರಾ ಗ್ರೂಪ್ಗೆ ಸೇರಿಕೊಂಡರು ಮತ್ತು ಪ್ರಮುಖ ಕಾರ್ಯತಂತ್ರದ ಉಪಕ್ರಮಗಳು, ಡಿಜಿಟೈಸೇಷನ್ ಮತ್ತು ಡೇಟಾ ಸೈನ್ಸಸ್ನಂತಹ ರಚಿತ ಸಾಮರ್ಥ್ಯಗಳ ಕುರಿತಾದ ಎಲ್ಲಾ ವ್ಯವಹಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ ಮತ್ತು ಗ್ರೂಪ್ ಕಂಪೆನಿಗಳಾದ್ಯಂತ ಸಿನರ್ಜಿಗಳನ್ನು ಸಾಧ್ಯಗೊಳಿಸಿದ್ದಾರೆ. ಸಿಇಒ ಪಾತ್ರಕ್ಕೆ ಬದಲಾವಣೆ ಯೋಜನೆಯ ಒಂದು ಭಾಗವಾಗಿ, 2019 ರಲ್ಲಿ ಇವರನ್ನು ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಗ್ರೂಪ್ ಸಿಎಫ್ಒ ಆಗಿ ನೇಮಿಸಲಾಯಿತು ಮತ್ತು ಗ್ರೂಪ್ ಕಾರ್ಪೊರೇಟ್ ಆಫೀಸಿನ ಜವಾಬ್ದಾರಿಯನ್ನು ಮತ್ತು ಆಟೋ ಮತ್ತು ಫಾರ್ಮ್ ಸೆಕ್ಟರ್ಗಳನ್ನು ಹೊರತುಪಡಿಸಿ ಎಲ್ಲಾ ವ್ಯವಹಾರಗಳ ಪೂರ್ಣ ಮೇಲ್ವಿಚಾರಣೆಯನ್ನು ಇವರಿಗೆ ನೀಡಲಾಯಿತು.
ಅನೀಶ್ ಅವರು 2009-14ರವರೆಗೆ GE (ಜಿಇ) ಕ್ಯಾಪಿಟಲ್ ಇಂಡಿಯಾದ ಅಧ್ಯಕ್ಷರು ಮತ್ತು ಸಿಇಒ ಆಗಿದ್ದರು, ಅಲ್ಲಿ ಇವರು SBI (ಎಸ್ಬಿಐ) ಕಾರ್ಡ್ ಜಂಟಿ ಉದ್ಯಮದ ಟರ್ನ್ಅರೌಂಡ್ ಸೇರಿದಂತೆ ವ್ಯವಹಾರದ ಪರಿವರ್ತನೆಗೆ ಕಾರಣರಾದರು. ಜಿಇಯಲ್ಲಿ ಇವರು 14 ವರ್ಷಗಳವರೆಗೆ ವೃತ್ತಿ ಮಾಡಿದ್ದು, ಈ ಸಮಯದಲ್ಲಿ ಅವರು ಜಿಇ ಕ್ಯಾಪಿಟಲ್ಸ್ ಯುಎಸ್ ಮತ್ತು ಜಾಗತಿಕ ಘಟಕಗಳಲ್ಲಿ ಹಲವಾರು ನಾಯಕತ್ವ ಸ್ಥಾನಗಳನ್ನು ಹೊಂದಿದ್ದರು. ಗ್ಲೋಬಲ್ ಮಾರ್ಟ್ಗೇಜ್ನ ನಿರ್ದೇಶಕರಾಗಿ, ಇವರು 33 ದೇಶಗಳಾದ್ಯಂತ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ರಿಸ್ಕ್ ಅನ್ನು ನಿರ್ವಹಿಸಲು ಕೆಲಸ ಮಾಡಿದರು. ಜಿಇ ಮಾರ್ಟ್ಗೇಜ್ ಇನ್ಶುರೆನ್ಸ್ ಕಂಪೆನಿಯಲ್ಲಿ ಹಿರಿಯ ಉಪಾಧ್ಯಕ್ಷರಾಗಿ (ಮಾರ್ಕೆಟಿಂಗ್ ಮತ್ತು ಉತ್ಪನ್ನ ಅಭಿವೃದ್ಧಿ) ಇವರು ವಿವಿಧ ಬೆಳವಣಿಗೆಯ ಉಪಕ್ರಮಗಳಿಗೆ ಮುಖಂಡರಾಗಿ ಮತ್ತುಜಿಇ ಯಿಂದ ಹಿಂತಿರುಗಿ ಐಪಿಒಗೆ ವ್ಯಾಪಾರವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು,ಜಿಇ ಜೊತೆಗಿನ ತಮ್ಮ ಆರಂಭಿಕ ವರ್ಷಗಳಲ್ಲಿ ಅನೀಶ್ ಅವರು, ಸ್ಟ್ರಾಟಜಿ, ಇಕಾಮರ್ಸ್ ಮತ್ತು ಸೇಲ್ಸ್ ಫೋರ್ಸ್ ಎಫೆಕ್ಟೀವ್ನೆಸ್ ಅನ್ನು ಮುನ್ನಡೆಸಿದರು ಮತ್ತು ಜಿಇ ಒಳಗೇ ಒಂದು ಡಾಟ್-ಕಾಮ್ ವ್ಯವಹಾರವನ್ನು ನಡೆಸುವ ಅಪೂರ್ವ ಅನುಭವವನ್ನು ಪಡೆದರು. "ಡಿಜಿಟಲ್ ಕಾಕ್ ಪಿಟ್" ಅನ್ನು ಅಭಿವೃದ್ಧಿಪಡಿಸುವುದರಲ್ಲಿ ಸಿಕ್ಸ್ ಸಿಗ್ಮಾವನ್ನು ಅತ್ಯುತ್ತಮವಾಗಿ ಬಳಸಿದ್ದಕ್ಕಾಗಿ ಅನೀಶ್ ಅವರು ಜಿಇಯ ಪ್ರತಿಷ್ಠಿತ ಲೂವೀಸ್ ಲ್ಯಾಟಿಮರ್ ಪ್ರಶಸ್ತಿಯನ್ನು ಸಹ ಪಡೆದುಕೊಂಡರು.
ಜಿಇಗೂ ಮೀರಿದ ಜಾಗತಿಕ ವ್ಯವಹಾರಗಳಲ್ಲಿ ಸಹ ಇವರು ವೈವಿಧ್ಯಮಯ ಅನುಭವವನ್ನು ಪಡೆದಿದ್ದಾರೆ. ಇವರು ಬ್ಯಾಂಕ್ ಆಫ್ ಅಮೆರಿಕದ ಯುಎಸ್ ಡೆಬಿಟ್ ಉತ್ಪನ್ನಗಳ ವ್ಯವಹಾರದಲ್ಲಿ ಮುಂದಾಳತ್ವ ವಹಿಸಿದರು, ಇದರಲ್ಲಿ ಅವರು ನವೀನ ರಿವಾರ್ಡ್ಸ್ ಪ್ರೋಗ್ರಾಂ ಅನ್ನು ಪ್ರಾರಂಭಿಸಿದರು, ಪಾವತಿ ತಂತ್ರಜ್ಞಾನದಲ್ಲಿ ಹಲವಾರು ಉಪಕ್ರಮಗಳನ್ನು ಮುನ್ನಡೆಸಿದರು ಮತ್ತು ಗ್ರಾಹಕರಿಗಾಗಿ ಮೌಲ್ಯವನ್ನು ಹೆಚ್ಚಿಸಲು ಬ್ಯಾಂಕಿನಾದ್ಯಂತ ವಿವಿಧ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದರು.
ಬೋಸ್ಟನ್ನ ಬೈನ್ & ಕಂಪೆನಿಯಲ್ಲಿ ಸ್ಟ್ರಾಟಜಿಕ್ ಕನ್ಸಲ್ಟೆಂಟ್ ಆಗಿ ಬ್ಯಾಂಕಿಂಗ್, ಆಯಿಲ್ ರಿಗ್ಸ್, ಪೇಪರ್, ಪೈಂಟ್, ಸ್ಟೀಮ್ ಬಾಯ್ಲರ್ಸ್ ಮತ್ತು ವೈದ್ಯಕೀಯ ಉಪಕರಣಗಳು ಸೇರಿದಂತೆ ಅನೇಕ ಉದ್ಯಮಗಳಲ್ಲಿ ಇವರು ಕೆಲಸ ಮಾಡಿದರು. ಇವರ ಮೊದಲ ಪಾತ್ರವು ಮುಂಬೈನ ಸಿಟಿ ಬ್ಯಾಂಕ್ನೊಂದಿಗಾಗಿತ್ತು, ಅಲ್ಲಿ ಇವರು ಟ್ರೇಡ್ ಸರ್ವಿಸಸ್ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಬ್ಯಾಂಕ್ ಗ್ಯಾರಂಟಿಗಳು ಮತ್ತು ಸಾಲ ಪತ್ರಗಳನ್ನು ಹೊರಡಿಸಿದರು.
ಅನೀಶ್ ಅವರು ಕಾರ್ನೆಗೀ ಮೆಲನ್ ಟೆಪ್ಪರ್ ಸ್ಕೂಲ್ ಆಫ್ ಬ್ಯುಸಿನೆಸ್ನಿಂದ ಪಿಎಚ್ಡಿ ಪದವಿ ಪಡೆದಿದ್ದು, ಅಲ್ಲಿ ಇವರ ಡಾಕ್ಟರೇಟ್ ಥೀಸಿಸ್ ಕಾರ್ಪೊರೇಟ್ ಆಡಳಿತ ಕ್ಷೇತ್ರದಲ್ಲಾಗಿತ್ತು. ಇವರು ಕಾರ್ನೆಗೀ ಮೆಲನ್ ಸಂಸ್ಥೆಯಿಂದ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ ಮತ್ತು ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಂದ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಇವರು ವಿಲಿಯಂ ಲ್ಯಾಟಿಮರ್ ಮೆಲನ್ ಸ್ಕಾಲರ್ಶಿಪ್, ಐಐಎಂಎ (IIMA)ದಲ್ಲಿ ಇಂಡಸ್ಟ್ರಿ ಸ್ಕಾಲರ್ಶಿಪ್, ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಮತ್ತು ಸರ್ ಡೊರಾಬ್ಜಿ ಟಾಟಾ ಟ್ರಸ್ಟ್ ಸೇರಿದಂತೆ ವಿವಿಧ ಸ್ಕಾಲರ್ಶಿಪ್ಗಳನ್ನು ಇವರು ಪಡೆದುಕೊಂಡಿದ್ದಾರೆ.
ಶ್ರಿ. ರಮೇಶ್ ಅಯ್ಯರ್ 30 ಎಪ್ರಿಲ್ 2001 ರಿಂದ ಕಂಪೆನಿಯ ವ್ಯವಸ್ಥಾಪಕ ಡೈರೆಕ್ಟರಾಗಿ ನೇಮಕಗೊಂಡಿದ್ದಾರೆ. ಅದಲ್ಲದೆ ಆರಂಭದಿಂದಲೂ ಇವರು ನಮ್ಮೊಂದಿಗೆ ಸಂಬಂಧವಿಟ್ಟು ಕೊಂಡಿದ್ದಾರೆ. ಇವರು ವ್ಯಾಪಾರ ಅಭಿವೃದ್ಧಿ, ಫೈನಾನ್ಸ್ ಹಾಗೂ ಮಾರ್ಕೇಟಿಂಗ್ ವಿಷಯದಲ್ಲಿ ಆಳವಾದ ಅನುಭವ ಹೊಂದಿದ್ದಾರೆ. ಮಿ. ಅಯ್ಯರ್ ಎಂ. ಆಂಡ್ ಎಂ. ಹೊಲ್ಡಿಂಗ್ ಕಂಪೆನಿಯ ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್ ಹಾಗೂ ಮಹಿಂದ್ರಾ ಗ್ರೂಪ್ ಕಂಪೆನಿಯ ವಿವಿಧ ಬೋರ್ಡ್ ನ ಸದಸ್ಯರಾಗಿದ್ದಾರೆ. ಇವರು ವಾಣಿಜ್ಯ(ಕಾಮರ್ಸ್ ನಲ್ಲಿ) ದಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ(ಬಿಸಿನೆಸ್ ಎಡ್ಮಿನಿಸ್ಟ್ರೇಶನ್ ನಲ್ಲಿ)ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಶ್ರೀ ಅಯ್ಯರ್ ಬಾಂಬೆ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಬ್ಯಾಂಕಿಂಗ್ ಮತ್ತು ಹಣಕಾಸು ಸಮಿತಿಯ ಸದಸ್ಯರಾಗಿದ್ದಾರೆ, ಹಣಕಾಸು ಕೈಗಾರಿಕಾ ಅಭಿವೃದ್ಧಿ ಮಂಡಳಿಯ (ಎಫ್ಐಡಿಸಿ) ಕೋರ್ ಸಮಿತಿ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್ಐಸಿಸಿಐ) ಫೆಡರೇಶನ್ನ ಎನ್ಬಿಎಫ್ಸಿಗಳ ಟಾಕ್ಸ್ ಫೋರ್ಸ್ ಆಗಿದ್ದರು. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು (ಸಿಯಾಮ್) ಸ್ಥಾಪಿಸಿದ ಆರ್ಥಿಕ ವ್ಯವಹಾರಗಳ ಪರಿಷತ್ತಿನ ಫೈನಾನ್ಸ್ ಮತ್ತು ಲೀಸಿಂಗ್ ಹಾಗೂ ವಿಮೆ ಕುರಿತು ಸಮೂಹದ ಸಹ-ಅಧ್ಯಕ್ಷರಾಗಿದ್ದಾರೆ.
ಶ್ರೀ ಅಯ್ಯರು ಹಲವು ಪ್ರಶಸ್ತಿ- ಪುರಸ್ಕಾರಗಳನ್ನು ಪಡೆದ ಒಬ್ಬ ಪ್ರಖ್ಯಾತ ವೃತ್ತಿಪರರಾಗಿದ್ದಾರೆ. ಭಾರತೀಯ ಸಾಧಕರ ವೇದಿಕೆಯಿಂದ ಕಾರ್ಪೋರೇಟ್ ನ್ಯಾಯಕತ್ವಕ್ಕಾಗಿ ಭಾರತೀಯ ಸಾಧಕರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ. ನವದೆಹಲಿಯ 'ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಸ್ಟಡೀಸ್' ನಿಂದ ಬಿಸಿನೆಸ್ ಲೀಡರ್ ಶೀಪ್ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಅವರ ನಾಯಕತ್ವವನ್ನು ಸಿಎಮ್ಒ ಏಷ್ಯಾದ ಎಂಪ್ಲಾಯರ್ ಬ್ರ್ಯಾಂಡಿಂಗ್ ಇನ್ಸ್ಟಿಟ್ಯೂಟ್ ನೀಡಿದ ‘ಸಿಇಒ' ವಿದ್ ಎಚ್ಆರ್ ಓರಿಯಂಟೇಶನ್’ ಪ್ರಶಸ್ತಿಯನ್ನು ಅವರ ಸ್ಟ್ರೇಜಿಕ್ ಪಾರ್ಟನರ್ ಸಿಎಮ್ಒ ಕೌನ್ಸಿಲ್ನೊಂದಿಗೆ ಶ್ಲಾಘಿಸಲಾಗಿದೆ. ಇದಲ್ಲದೆ, ಅವರು ನವದೆಹಲಿಯ ಆರ್ಥಿಕ ಅಧ್ಯಯನ ಸಂಸ್ಥೆಯ ಉದ್ಯೋಗ್ ರತನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ, ಪುಣೆಯ ಕೌನ್ಸಿಲ್ ಫಾರ್ ಎಕನಾಮಿಕ್ ಗ್ರೋತ್ ಹಾಗೂ ರಿಸರ್ಚ್ ನಿಂದ ರಾಷ್ಟ್ರದ ರಾಷ್ಟ್ರೀಯ ಉದ್ಯೋಗ್ ಪ್ರತಿಭಾ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಮತ್ತು ಮುಂಬಯಿಯ ರಾಷ್ಟ್ರೀಯ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಭಾರತೀಯ ಉದ್ಯೋಗ ರತ್ನ ಪ್ರಶಸ್ತಿ, ಇವೀಷ್ಟೆ ಅಲ್ಲದೆ ;
ಶ್ರೀ ರಮೇಶ್ ಅಯ್ಯರ್ ಅವರು ಬಿಸಿನೆಸ್ ವರ್ಲ್ಡ್ ನ ಭಾರತದ ಅತ್ಯಂತ 'ಮೌಲ್ಯಯುತ' ಸಿಇಒಗಳ ಬಗೆಗಿನ ವಿಶೇಷ ಸುದ್ದಿಯಲ್ಲಿಯು ಕಾಣಿಸಿಕೊಂಡಿದ್ದಾರೆ. ಇವರು ಮಧ್ಯಮ ಗಾತ್ರದ (Mid sized) ಕಂಪೆನಿಗಳ ಲೀಸ್ಟ್ ನಲ್ಲಿ 65 ರಲ್ಲಿ 5ನೇ ಸ್ಥಾನವನ್ನು ಪಡೆದಿದ್ದಾರೆ.(ಆದಾಯ ರೂ. 1000 ದಿಂದ 3000 ಕೋಟಿ) ಮತ್ತು ಅದರ ಒಂದು ವರ್ಷದ ಸಾಧನೆಯ ಆಧಾರದ ಮೇಲೆ ಅದೇ ವಿಭಾಗದಲ್ಲಿ 65 ರಲ್ಲಿ 6ನೇ ಸ್ಥಾನವನ್ನು ಪಡೆದಿದ್ದಾರೆ. ಅದಲ್ಲದೆ ಕಂಪೆನಿಯ 5 ವರ್ಷದ ಸಾಧನೆಯಲ್ಲಿ 100 ರಲ್ಲಿ 20ನೇ ಸ್ಥಾನವನ್ನು ಪಡೆದಿದ್ದು ಫೈನಾನ್ಶಿಯಲ್ ಸೆಕ್ಟರ್ ನಲ್ಲಿ 12 ರಲ್ಲಿ 3 ನೆ ರಾಂಕ್ ನ್ನು ಪಡೆದುಕೊಂಡಿದ್ದಾರೆ.
ಶ್ರೀ. ಧನಂಜಯ ಮುಂಗಲೆ ಅವರು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಕಾರ್ಮಸ್ ಹಾಗೂ ಕಾನೂನು(ಲಾ) ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದ ಬಹುಭಾಗವನ್ನು ಭಾರತ ಮತ್ತು ಯುರೋಪಿನಲ್ಲಿ ಕಾರ್ಪೊರೇಟ್ ಮತ್ತು ಇನ್ವೆಸ್ಟ್ ಮೆಂಟ್ ಬ್ಯಾಂಕಿಂಗ್ನಲ್ಲಿ ಕಳೆದಿದ್ದಾರೆ. ಅವರು ಪ್ರೈವೇಟ್ ಬ್ಯಾಕಿಂಗ್ ಹಾಗೂ ಬ್ಯಾಂಕ್ ಆಫ್ ಅಮೇರಿಕಾದಲ್ಲಿ ಉಪಾಧ್ಯಕ್ಷರಾಗಿದ್ದರು. ಮತ್ತು ಡಿಎಸ್ಪಿ ಮೆರಿಲ್ ಲಿಂಚ್ ಲಿಮಿಟೆಡ್ ನ ಎಕ್ಸಿಕ್ಯೂಟಿವ್ ಕಮಿಟಿಯ ಸದಸ್ಯರಾಗಿದ್ದರು. ಸದ್ಯಕ್ಕೆ, ಅವರು ಭಾರತ ಹಾಗೂ ಯುರೋಪ್ ಇವೆರಡರ ವಿವಿಧ ನಿಗಮಗಳಲ್ಲಿ ಸಲಹೆಗಾರರಾಗಿದ್ದಾರೆ. ಅವರು ವಿವಿಧ ಸಾರ್ವಜನಿಕ ಮತ್ತು ಖಾಸಗಿ ಸೀಮಿತ ಕಂಪನಿಗಳ ಮಂಡಳಿಗಳಲ್ಲಿ ಆಯ್ಕೆಯಾಗಿದ್ದಾರೆ. ಅವರು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದಾರೆ - ಆಕ್ಸ್ಫರ್ಡ್ ಸೆಂಟರ್ ಫಾರ್ ಹಿಂದೂ ಸ್ಟಡೀಸ್, ಆಕ್ಸ್ಫರ್ಡ್, ಯು.ಕೆ. ಮತ್ತು ಮಹಿಂದ್ರಾ ಯುನೈಟೆಡ್ ವರ್ಲ್ಡ್ ಕಾಲೇಜಿನ ರಾಷ್ಟ್ರೀಯ ಸಮಿತಿಯ ಸದಸ್ಯರೂ ಆಗಿದ್ದಾರೆ.
ಶ್ರೀ. ಚಂದ್ರಶೇಖರ್ ಭಾವೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ 1975 ರಲ್ಲಿ ಭಾರತೀಯ ಆಡಳಿತ ಸೇವೆಯಲ್ಲಿ (ಐಎಎಸ್) ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದರು ಮತ್ತು ಕುಟುಂಬ ಕಲ್ಯಾಣ ಮತ್ತು ಆಡಳಿತದಲ್ಲಿ ಶ್ರೇಷ್ಠತೆಗಾಗಿ ಮಾಡಿದ ಅತ್ಯುತ್ತಮ ಕಾರ್ಯಗಳಿಗಾಗಿ ಮಹಾರಾಷ್ಟ್ರ ಸರ್ಕಾರದಿಂದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ನಂತರ ಅವರು 1992–1996ರ ಅವಧಿಯಲ್ಲಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದಲ್ಲಿ (ಸೆಬಿ) ಕೆಲಸ ಮಾಡಿದರು, ಭಾರತೀಯ ಬಂಡವಾಳ ಮಾರುಕಟ್ಟೆಗಳಿಗೆ ನಿಯಂತ್ರಕ ಮೂಲಸೌಕರ್ಯಗಳನ್ನು ರಚಿಸಲು ಸಹಾಯ ಮಾಡಿದರು.
ಶ್ರೀ ಭಾವೆ ಐಎಎಸ್ ನಿಂದ ಸ್ವಯಂಪೇರಿತ ನಿವೃತ್ತಿಯನ್ನು ಪಡೆದುಕೊಂಡು, 1996 ರಲ್ಲಿ ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ನ್ನು ಸೆಟ್ ಆಪ್ ಮಾಡಿದರು. ಮತ್ತು 1996 ರಿಂದ 2008 ರವರೆಗೆ ಅದರ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಶ್ರೀ ಭಾವೆ ಭಾರತದ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿಯ ಅಧ್ಯಕ್ಷರಾಗಿದ್ದರು. 2008 ರಿಂದ 2011 ರವರೆಗೆ. ಅವರು ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾಗಿದ್ದರು ಮತ್ತು ಈ ಅವಧಿಯಲ್ಲಿ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಸೆಕ್ಯುರಿಟೀಸ್ ಕಮಿಷನ್ಗಳ (ಐಒಎಸ್ಕೊ) ತಾಂತ್ರಿಕ ಮತ್ತು ಕಾರ್ಯಕಾರಿ ಸಮಿತಿಗಳ ಸದಸ್ಯರಾಗಿದ್ದರು.
ಶ್ರೀ ಭಾವೆಯವರು ತಮ್ಮನ್ನು ಹಲವು ವೃತ್ತಿಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅವುಗಳೆಂದರೆ:
ಇವರು ಸಾರ್ವಜನಿಕ ಹಿತಾಸಕ್ತಿ ಮೇಲ್ವಿಚಾರಣಾ ಮಂಡಳಿಯ (ಪಿಐಒಬಿ) ಸದಸ್ಯರಾಗಿದ್ದಾರೆ, ಇದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಕೋನದಿಂದ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಅಕೌಂಟೆಂಟ್ಸ್ನ ಸ್ಟಾಂಡರ್ಡ್-ಸೆಟ್ಟಿಂಗ್ ಸಂಸ್ಥೆಗಳ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತದೆ. ಲಂಡನ್ ನಗರದ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. ಇಂಟರ್ನ್ಯಾಷನಲ್ ಅಕೌಂಟಿಂಗ್ ಸ್ಟ್ಯಾಂಡರ್ಡ್ಸ್ ಬೋರ್ಡ್ನ ಮೇಲ್ವಿಚಾರಣೆಯ ಲಂಡನ್ನ ಐಎಫ್ಆರ್ ಎಸ್ ಫೌಂಡೇಶನ್ನ ಟ್ರಸ್ಟೀಯಾಗಿದ್ದಾರೆ,.
ಶ್ರೀ ಭಾವೆ ಇಂಡಿಯನ್ ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಸೆಟಲ್ಮೆಂಟ್ಸ್ (ಐಐಹೆಚ್ಎಸ್) ನ ನಾನ್ -ಎಕ್ಸಿಕ್ಯುಟಿವ್ ಚೇರ್ ಮ್ಯಾನ್ ಆಗಿದ್ದು, ಈ ಲಾಭರಹಿತ ಸಂಸ್ಥೆಯು, ನಗರ ಪ್ರದೇಶಗಳಲ್ಲಿ ಮಾನವ ವಸಾಹತುಗಳಿಗೆ ಸಂಬಂಧಿಸಿದ ಜ್ಞಾನವನ್ನು ರಚಿಸುವ ಹಾಗೂ ಪ್ರಸಾರ ಮಾಡುವ ಉದ್ದೇಶದಿಂದ ಸ್ಥಾಪಿಸಲಾಗಿದೆ.
ಶ್ರೀಮತಿ ರಮಾ ಬಿಜಾಪುರ್ ಕರ್ ವಿಜ್ಞಾನದಲ್ಲಿ ಪದವಿ (ಗೌರವ) ಪಡೆದಿದ್ದಾರೆ. ಮತ್ತು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ನಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರು ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಂದ ಸ್ನಾತಕೋತ್ತರ ಡಿಪ್ಲೊಮಾ ಇನ್ ಮ್ಯಾನೇಜ್ಮೆಂಟ್ ಅನ್ನು ಗಳಿಸಿದರು, ಅಲ್ಲಿ ಅವರು ಈಗ ಆಡಳಿತ ಮಂಡಳಿಯ ಸಕ್ರಿಯ ಸದಸ್ಯೆ ಹಾಗೂ ಭೇಟಿ ನೀಡುವ ಅಧ್ಯಾಪಕರಾಗಿದ್ದಾರೆ. ಅವರು ಇಂಡಿಪೆಂಡೆಂಡ್ ಮಾರ್ಕೆಟ್ ಸ್ಟ್ರೇರ್ಟಜಿಯ ಸಲಹೆಗಾರರಾಗಿದ್ದಾರೆ ಮತ್ತು ಜಾಹೀರಾತು, ಮಾರ್ಕೆಟಿಂಗ್ ಮತ್ತು ಸಲಹಾ ಮುಂತಾದ ಉದ್ಯಮಗಳಲ್ಲಿ ಸುಮಾರು 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಈ ಹಿಂದೆ ಮೆಕಿನ್ಸೆ ಆಂಡ್ ಕಂಪನಿ, ಎಸಿ ನೀಲ್ಸನ್ ಇಂಡಿಯಾದೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ನೊಂದಿಗೆ ಫುಲ್- ಟೈಮ್ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಅವರು ಉದಯೋನ್ಮುಖ ಮಾರುಕಟ್ಟೆ ಮತ್ತು ಗ್ರಾಹಕ ಸಂಬಂಧಿತ ವಿಷಯಗಳ ಕುರಿತು ಹಲವಾರು ಬರಹಗಳನ್ನು ಬರೆದಿದ್ದು, ‘ಭಾರತೀಯ ಮಾರುಕಟ್ಟೆಯಲ್ಲಿ ವಿನ್ನಿಂಗ್(Winning in the Indian Market)" ಎಂಬ ಶೀರ್ಷಿಕೆಯಡಿ understanding the transpormation of Consumer India’ ಎಂಬ ಕೃತಿಯನ್ನು ಹೊರತಂದಿದ್ದಾರೆ.
ಪ್ರಸ್ತುತ, ಶ್ರೀಮತಿ ಬಿಜಾಪುರ್ ಕರ್ ವಿವಿಧ ಹೆಸರಾಂತ ಕಂಪನಿಗಳ ಮಂಡಳಿಯಲ್ಲಿ(ಬೋರ್ಡ್ಸ್) ಸ್ವತಂತ್ರ ನಿರ್ದೇಶಕರಾಗಿದ್ದಾರೆ.
ಶ್ರಿ. ಮಿಲಿಂದ್ ಸರ್ವಾಟೆ ಇವರು ಸ್ವತಂತ್ರ ನಿರ್ದೇಶಕ, ಕಾಸ್ಟ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ, ವಾಣಿಜ್ಯ ಪದವೀಧರ ಮತ್ತು ಸಿಐಐ-ಫುಲ್ಬ್ರೈಟ್ ಫೆಲೋ (ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯ, ಪಿಟ್ಸ್ಬರ್ಗ್, ಯುಎಸ್ಎ) ಆಗಿ ಮಾರಿಕೊ ಮತ್ತು ಗೋದ್ರೇಜ್ನಂತಹ ಗುಂಪುಗಳಲ್ಲಿ ಹಣಕಾಸು, ಮಾನವ ಸಂಪನ್ಮೂಲ, ಕಾರ್ಯತಂತ್ರ ಮತ್ತು ಕಾರ್ಪೊರೇಟ್ ಕಮ್ಯುನಿಕೇಶನ್ ನಲ್ಲಿ ಸುಮಾರು 35 ವರ್ಷಗಳ ಅನುಭವವನ್ನು ಪಡೆದಿದ್ದಾರೆ.
ಶ್ರಿ. ಮಿಲಿಂದ್ ಸರ್ವಾಟೆ ಅವರು Increate Value Advisor LLP(ಇನ್ಕ್ರೀಯೇಟ್ ವ್ಯಾಲೂ ಎಡ್ವೈಸರ್ಸ್ ಎಲ್ ಎಲ್ ಪಿ) ಯ ಸ್ಥಾಪಕ ಮತ್ತು ಸಿಇಒ ಆಗಿದ್ದಾರೆ. ಅವರ ಉದ್ದೇಶವೆಂದರೆ ಸಂಸ್ಥೆಗಳು ಹಾಗೂ ವ್ಯಕ್ತಿಗಳು ವ್ಯವಹಾರ ಮತ್ತು ಸಾಮಾಜಿಕ ಮೌಲ್ಯವನ್ನು ಸೃಷ್ಟಿಸಲು ಅನುವು ಮಾಡಿಕೊಡುವುದಾಗಿದೆ. ಅವರು ತಮ್ಮ ಧ್ಯೇಯಕ್ಕಾಗಿ ಸಲಹೆಗಾರ, ಮಂಡಳಿ ಸದಸ್ಯ ಮತ್ತು ಹೂಡಿಕೆದಾರರಂತಹ ವಿವಿಧ ಪಾತ್ರಗಳನ್ನು ನಿಭಾಯಿಸಿದ್ದಾರೆ.
ಅವರ ಸಲಹಾ ಪಾತ್ರಗಳು ಗ್ರಾಹಕವಲಯ ಹಾಗೂ ಸಾಮಾಜಿಕ ಜವಾಬ್ದಾರಿಯ ಕ್ಷೇತ್ರವನ್ನು ಒಳಗೊಂಡಿವೆ. ಅವರ ನಿರ್ದೇಶಕರಲ್ಲಿ ಗ್ಲೆನ್ಮಾರ್ಕ್, ಮೈಂಡ್ಟ್ರೀ, ಮೆಟ್ರೊಪೊಲಿಸ್ ಹೆಲ್ತ್ಕೇರ್, ಮ್ಯಾಟ್ರಿಮೋನಿ.ಕಾಮ್ ಮತ್ತು ಹೌಸ್ ಆಫ್ ಅನಿತಾ ಡೊಂಗ್ರೆ ಇವೆಲ್ಲವು ಸೇರಿಕೊಂಡಿದ್ದಾರೆ. ಅವರ ಹೂಡಿಕೆಯ ಕೇಂದ್ರಿಕೃತ ಕ್ಷೇತ್ರಗಳೆಂದರೆ, ಗ್ರಾಹಕ ವಲಯ ಹಾಗೂ ಫಂಡ್ಸ್ / ಘಟಕಗಳ ವಿಶಿಷ್ಟ ಪಾಂಡಿತ್ಯದ ಸುತ್ತ ನಿರ್ಮಿಸಲಾದ ಫೈನಾನ್ಸ್ ಆಂಡ್ ಮಾನವ ಸಂಪನ್ಮೂಲಗಳಾಗಿವೆ.
ಶ್ರಿ. ಮಿಲಿಂದ್ ಸರ್ವಾಟೆ ಅವರು 2011 ರಲ್ಲಿ ಐಸಿಎಐ ಪ್ರಶಸ್ತಿ - ಸಿಎಫ್ಒ-ಎಫ್ಎಂಸಿಜಿ ಯಿಂದ ಹಾಗೂ 2012 ರಲ್ಲಿ ಸಿಎನ್ಬಿಸಿ ಟಿವಿ -18 ಸಿಎಫ್ಒ ಪ್ರಶಸ್ತಿ-ಎಫ್ಎಂಸಿಜಿ ಆಂಡ್ ರಿಟೇಲ್ ನಿಂದ ಪಡೆದರು. ಅವರನ್ನು 2013 ರಲ್ಲಿ ಸಿಎಫ್ಒ ಇಂಡಿಯಾದ ಹಾಲ್ ಆಫ್ ಫೇಮ್ಗೆ ಸೇರಿಸಲಾಯಿತು.
ಅಮಿತ್ ರಾಜೆಯವರು ಪ್ರಸ್ತುತ ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ನ ಪೂರ್ಣ ಕಾಲಿಕ ನಿರ್ದೇಶಕರಾಗಿದ್ದು, "ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಿಜಿಟಲ್ ಫೈನಾನ್ಸ್ – ಡಿಜಿಟಲ್ ಬಿಸಿನೆಸ್ ಯೂನಿಟ್" ಎಂಬ ಹುದ್ದೆಗೆ ನೇಮಕ ಹೊಂದಿದ್ದಾರೆ. ಇಸವಿ 2020ರ ಜುಲೈ ತಿಂಗಳಿನಲ್ಲಿ ಅಮಿತ್ ಅವರು ಮಹೀಂದ್ರಾ ಗ್ರೂಪ್ಗೆ ಪಾಲುದಾರಿಕೆಗಳು ಮತ್ತು ಮೈತ್ರಿಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಸೇರಿಕೊಂಡರು ಮತ್ತು ಎಂ&ಎ ಹಾಗೂ ಇನ್ವೆಸ್ಟರ್ ರಿಲೇಶನ್ಸ್ ಅನ್ನು ಮುನ್ನಡಿಸುವ ಜವಾಬ್ದಾರಿಯನ್ನು ಹೊತ್ತಿದ್ದರು. ಮಹೀಂದ್ರಾ ಗ್ರೂಪ್ಗೆ ಸೇರಿಕೊಳ್ಳುವ ಮೊದಲು ಅಮಿತ್ ಅವರು ಗೋಲ್ಡ್ಮನ್ ಸ್ಯಾಚ್ಸ್ನ ಪ್ರಧಾನ ಹೂಡಿಕೆ ಕ್ಷೇತ್ರದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಅವರು ನಾವೆಲ್ಟೆಕ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್, ಗುಡ್ ಹೋಸ್ಟ್ ಸ್ಪೇಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮಂಡಳಿಗಳಲ್ಲಿ ಗೋಲ್ಡ್ಮನ್ ಸ್ಯಾಚ್ಸ್ನ ನಾಮಿನಿ ಡೈರೆಕ್ಟರ್ ಆಗಿದ್ದರು. ಅಮಿತ್ ಅವರಿಗೆ ಕಾರ್ಪೊರೇಟ್ ಫೈನಾನ್ಸ್, ವಿಲೀನಗಳು ಮತ್ತು ಸ್ವಾಧೀನಗಳು ಮತ್ತು ಪ್ರೈವೈಟ್ ಇಕ್ವಿಟಿಯಲ್ಲಿ ಒಟ್ಟು 20 ಕ್ಕಿಂತಲೂ ಹೆಚ್ಚು ವರ್ಷಗಳ ಅನುಭವವಿದೆ. ಗೋಲ್ಡ್ಮನ್ ಸ್ಯಾಚ್ಸ್ ಜೊತೆ ಕೆಲಸ ಮಾಡುವುದಕ್ಕೆ ಮೊದಲು ಅಮಿತ್ ಅವರು ಕೊಟಕ್ ಮಹೀಂದ್ರಾ ಬ್ಯಾಂಕಿನ ಪರ್ಯಾಯ ಆಸ್ತಿ ವಿಭಾಗವಾಗಿರುವ ಕೊಟಕ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಲಿಮಿಟೆಡ್ ಜೊತೆಗೆ ಮತ್ತು ಡೆಲಾಯ್ಟ್ ಅಂಡ್ ಕೊ ನಲ್ಲಿ ವಹಿವಾಟು ಸಲಹಾ ಸೇವೆಗಳಲ್ಲಿ ಕೆಲಸ ಮಾಡಿದ್ದರು. ಅಮಿತ್ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಮತ್ತು ಲಂಡನ್ ಬಿಸಿನೆಸ್ ಸ್ಕೂಲ್ನಿಂದ ಎಂಬಿಎ ಜೊತೆಗೆ ಫೈನಾನ್ಸ್ ಅಂಡ್ ಪ್ರೈವೇಟ್ ಇಕ್ವಿಟಿಯಲ್ಲಿ ಪಾಂಡಿತ್ಯವನ್ನು ಪಡೆದಿದ್ದಾರೆ.
ಡಾ. ರೆಬೆಕ್ಕಾ ನ್ಯೂಜೆಂಟ್ ಅವರು ಸ್ಟ್ಯಾಟಿಸ್ಟಿಕ್ಸ್ ಮತ್ತು ಡೇಟಾ ಸೈನ್ಸ್ನಲ್ಲಿ ಸ್ಟೀಫನ್ ಇ. ಅಂಡ್ ಜಾಯ್ಸ್ ಫಿಯೆನ್ಬರ್ಗ್ ಪ್ರೊಫೆಸರ್ ಆಗಿದ್ದಾರೆ ಮತ್ತು ಕಾರ್ನೆಗೀ ಮೆಲಾನ್ ಸ್ಟ್ಯಾಟಿಸ್ಟಿಕ್ಸ್ ಮತ್ತು ಡೇಟಾ ಸೈನ್ಸ್ ವಿಭಾಗದ ಡಿಪಾರ್ಟ್ಮೆಂಟ್ ಹೆಡ್ ಆಗಿದ್ದಾರೆ ಮತ್ತು ಬ್ಲಾಕ್ ಸೆಂಟರ್ ಫಾರ್ ಟೆಕ್ನಾಲಜಿ ಅಂಡ್ ಸೊಸೈಟಿ ಅಂಗಸಂಸ್ಥೆಯ ಅಧ್ಯಾಪಕ ಸದಸ್ಯೆ ಆಗಿದ್ದಾರೆ. ಸ್ಟ್ಯಾಟಿಸ್ಟಿಕ್ಸ್ ಮತ್ತು ಡೇಟಾ ಸೈನ್ಸ್ ಕನ್ಸಲ್ಟಿಂಗ್, ರೀಸರ್ಚ್, ಅಪ್ಲಿಕೇಷನ್ಸ್, ಶಿಕ್ಷಣ ಮತ್ತು ಆಡಳಿತದಲ್ಲಿ ವಿಶ್ವವಿದ್ಯಾಲಯ ಮಟ್ಟದ ಅಕಾಡೆಮಿಯಲ್ಲಿ ಇವರು 15 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಡಾ. ನ್ಯೂಜೆಂಟ್ ಅವರು ಡೇಟಾ ಬಳಕೆಯಲ್ಲಿ ರಕ್ಷಣಾ ಸಂಗ್ರಹಣೆ ಕಾರ್ಯಪಡೆಯ ಸಾಮರ್ಥ್ಯವನ್ನು ಉತ್ತಮಗೊಳಿಸುವ ಅಧ್ಯಯನ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ಎಂಜಿನಿಯರಿಂಗ್ ಅಂಡ್ ಮೆಡಿಸಿನ್ನ ಸಹ-ಅಧ್ಯಕ್ಷರಾಗಿದ್ದಾರೆ ಮತ್ತು ಇತ್ತೀಚೆಗೆ ಎನ್ವಿಷನಿಂಗ್ ದ ಡೇಟಾ ಸೈನ್ಸ್ ಡಿಸಿಪ್ಲಿನ್: ದಿ ಅಂಡರ್ಗ್ರ್ಯಾಜುಯೇಟ್ ಪರ್ಸ್ಪೆಕ್ಟೀವ್ ನಾಸೆಮ್ (NASEM) ಅಧ್ಯಯನದಲ್ಲಿ ಸೇವೆ ಸಲ್ಲಿಸಿದ್ದಾರೆ.
ಸದ್ಯದ ವ್ಯವಹಾರ ಪಂಥಾಹ್ವಾನಗಳಿಗೆ ಡೇಟಾ ಸೈನ್ಸ್ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮತ್ತು ನಿಯೋಜಿಸುವ ವಿಷಯದಲ್ಲಿ ಉದ್ಯಮ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿರುವ ಮತ್ತು ಫೈನಾನ್ಸ್, ಮಾರ್ಕೆಟಿಂಗ್, ಹೆಲ್ತ್ ಕೇರ್ ಮತ್ತು ಶೈಕ್ಷಣಿಕ ತಂತ್ರಜ್ಞಾನದಲ್ಲಿನ ಜಾಗತಿಕ ಉದ್ಯಮಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುವಂತಹ ಪ್ರಾಯೋಗಿಕ ಕಲಿಕೆಯ ಉಪಕ್ರಮವಾಗಿರುವ ಸ್ಟ್ಯಾಟಿಸ್ಟಿಕ್ಸ್ ಅಂಡ್ ಡೇಟಾ ಸೈನ್ಸ್ ಕಾರ್ಪೊರೇಟ್ ಕ್ಯಾಪ್ಸ್ಟೋನ್ ಪ್ರೋಗ್ರಾಂನ ಫೌಂಡಿಂಗ್ ಡೈರೆಕ್ಟರ್ (ಸ್ಥಾಪಕ ನಿರ್ದೇಶಕರು) ಆಗಿದ್ದಾರೆ. ಡಾ. ನ್ಯೂಜೆಂಟ್ ಅವರು ಅಧಿಕ ಆಯಾಮದ, ದೊಡ್ಡ ಡೇಟಾ ಸಮಸ್ಯೆಗಳು ಹಾಗೂ ರೆಕಾರ್ಡ್ ಲಿಂಕೇಜ್ ಅಪ್ಲಿಕೇಶನ್ಗಳಿಗೆ ಒತ್ತು ನೀಡುವುದರೊಂದಿಗೆ ಕ್ಲಸ್ಟರಿಂಗ್ ಮತ್ತು ಕ್ಲಾಸಿಫಿಕೇಷನ್ ಮೆತಡಾಲಜಿಯಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ ಮತ್ತು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಕ್ಲಾಸಿಫಿಕೇಶನ್ ಸೊಸೈಟೀಸ್ನ (2022ಕ್ಕೆ ನಾಮನಿರ್ದೇಶನ ಮಾಡಲಾಗಿದೆ) ಅಧ್ಯಕ್ಷರಾಗಿರುವುದೂ ಸೇರಿದಂತೆ ಸಂಬಂಧಿತ ನಾಯಕತ್ವದ ಸ್ಥಾನಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಡೇಟಾ ತಿಳುವಳಿಕೆಯುಳ್ಳ ನಿರ್ಧಾರ ಮಾಡುವಿಕೆಯನ್ನು ಉತ್ತೇಜಿಸುವ ಮತ್ತು ಸ್ವೀಕರಣಶೀಲ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವ ಮತ್ತು ಡೇಟಾ ಸೈನ್ಸ್ ಅನ್ನು ವಿಜ್ಞಾನವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡುವ ಸಂವಾದಾತ್ಮಕ ದತ್ತಾಂಶ ವಿಶ್ಲೇಷಣಾ ವೇದಿಕೆಗಳ ಅಭಿವೃದ್ಧಿ ಮತ್ತು ನಿಯೋಜನೆಯೇ ಅವರ ಪ್ರಸ್ತುತ ಸಂಶೋಧನಾ ಕೇಂದ್ರಬಿಂದುವಾಗಿದೆ.
ಇವರು ಸ್ಟ್ಯಾಟಿಸ್ಟಿಕ್ಸ್ ಎಜುಕೇಷನ್ನಲ್ಲಿ ನಾವೀನ್ಯತೆಗಾಗಿ ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ ವಾಲರ್ ಅವಾರ್ಡ್ ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ವಿಶ್ವವಿದ್ಯಾಲಯದ ಬೋಧನಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಸ್ಪ್ರಿಂಗರ್ ಟೆಕ್ಸ್ಟ್ಸ್ ಇನ್ ಸ್ಟಾಟಿಸ್ಟಿಕ್ಸ್ನ ಸಹ-ಸಂಪಾದಕರಲ್ಲಿ ಒಬ್ಬರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸ್ಟಾಟಿಸ್ಟಿಕ್ಸ್ನಲ್ಲಿ ತಮ್ಮ ಪಿಎಚ್ಡಿ ಪದವಿಯನ್ನು, ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ಟಾಟಿಸ್ಟಿಕ್ಸ್ನಲ್ಲಿ ತಮ್ಮ ಎಂ.ಎಸ್ ಅನ್ನು, ಮತ್ತು ರೈಸ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರ, ಸ್ಟಾಟಿಸ್ಟಿಕ್ಸ್ ಮತ್ತು ಸ್ಪ್ಯಾನಿಷ್ನಲ್ಲಿ ಬಿ.ಎ. ಪದವಿಯನ್ನು ಪಡೆದಿದ್ದಾರೆ.
ಶ್ರೀ ಅಮಿತ್ ಸಿನ್ಹಾ ಅವರನ್ನು ಮೂಲ ಕಂಪೆನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ (“M&M”) ಅಧ್ಯಕ್ಷರು, ಗ್ರೂಪ್ ಸ್ಟ್ರಾಟಜಿ ಆಗಿ ನೇಮಕ ಮಾಡಿದ್ದು 2020ರ ನವೆಂಬರ್ 1 ರಿಂದ ಇದು ಜಾರಿಗೆ ಬಂದಿದೆ. ಶ್ರೀ ಅಮಿತ್ ಸಿನ್ಹಾ ಅವರು ಗ್ರೂಪ್ ಸ್ಟ್ರಾಟಜಿ ಆಫೀಸನ್ನು ಮುನ್ನಡಿಸುತ್ತಿದ್ದಾರೆ ಮತ್ತು ಗ್ರೂಪ್ನ ಅಲ್ಪಾವಧಿಯ, ಮಧ್ಯಮ ಮತ್ತು ದೀರ್ಘಾವಧಿಯ ಬೆಳವಣಿಗೆಗಾಗಿ ವ್ಯವಹಾರದ ಸಂಪೂರ್ಣ ಅಧಿಕಾರ ಕ್ಷೇತ್ರದೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಇವರು ಅಂತರರಾಷ್ಟ್ರೀಯ ಸಮಿತಿಯ ಸಮರ್ಥಕರೂ ಆಗಿದ್ದಾರೆ ಮತ್ತು ಅಮೆರಿಕಾ, ಏಷ್ಯಾ ಪೆಸಿಫಿಕ್ ಮತ್ತು ಆಫ್ರಿಕಾದಾದ್ಯಂತ ಅಂತರರಾಷ್ಟ್ರೀಯ ಸಿನರ್ಜಿಗಳನ್ನು ಸಂಘಟಿಸಲು ಸಹಾಯ ಮಾಡುತ್ತಾರೆ. ಇವರ ಅಧಿಕಾರ ಕ್ಷೇತ್ರದಲ್ಲಿ ಅಪಾಯ ಮತ್ತು ಅರ್ಥಶಾಸ್ತ್ರಜ್ಞ ಕಾರ್ಯಚಟುವಟಿಕೆಗಳು ಸಹ ಒಳಗೂಡಿವೆ. ಇವರು ಗ್ರೂಪ್ ಕಾರ್ಪೊರೇಟ್ ಆಫೀಸ್ ಲೀಡರ್ಶಿಪ್ ಟೀಮ್ನ ಭಾಗವಾಗಿದ್ದಾರೆ.
ಎಂ&ಎಂಗೆ ಸೇರಿಕೊಳ್ಳುವ ಮೊದಲು ಶ್ರೀ ಅಮಿತ್ ಸಿನ್ಹಾ ಅವರು ಬೈನ್ ಅಂಡ್ ಕಂಪೆನಿಯೊಂದಿಗೆ ಹಿರಿಯ ಪಾಲುದಾರರು ಮತ್ತು ಡೈರೆಕ್ಟರ್ ಆಗಿದ್ದರು. ಬೈನ್ನಲ್ಲಿ ಕಳೆದ 18 ವರ್ಷಗಳಲ್ಲಿ ಇವರು ದೊಡ್ಡ ಪ್ರಮಾಣದ, ಬಹು-ದೇಶದ ಸ್ಟ್ರಾಟಜಿ, ಸಂಸ್ಥೆ, ಡಿಜಿಟಲ್ ಮತ್ತು ಕಾರ್ಯಕ್ಷಮತೆ ಸುಧಾರಣಾ ಯೋಜನೆಗಳನ್ನು ನಿರ್ವಹಿಸಿದ್ದಾರೆ. ಅಷ್ಟುಮಾತ್ರವಲ್ಲ ಯು.ಎಸ್. ಮತ್ತು ಭಾರತದಾದ್ಯಂತ ಪ್ರೈವೇಟ್ ಈಕ್ವಿಟಿ ಫಂಡ್ಗಳನ್ನು ಮುನ್ನಡೆಸಲಿಕ್ಕಾಗಿ ಹಲವಾರು ಕಮರ್ಷಿಯಲ್ ಡ್ಯೂ ಡಿಲಿಜೆನ್ಸ್ ಮತ್ತು ಪೂರ್ಣ ಸಂಭಾವ್ಯ ಪೋರ್ಟ್ಪೋಲಿಯೋ ಸ್ಟ್ರಾಟಜಿ ಪ್ರಾಜೆಕ್ಟ್ಗಳನ್ನು (ಖರೀದಿ ನಂತರ) ಸಹ ಮುನ್ನಡೆಸಿದ್ದಾರೆ. ಶ್ರೀ ಅಮಿತ್ ಸಿನ್ಹಾ ಅವರು ಟಾಟಾ ಮೋಟಾರ್ಸ್ನೊಂದಿಗೆ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು ಮತ್ತು ಭಾರತ, ಸಿಂಗಾಪುರ ಮತ್ತು ಯುಎಸ್ನಲ್ಲಿ ಟೆಕ್ನಾಲಜಿ ಲೀಡರ್ಶಿಪ್ ಪಾತ್ರಗಳಲ್ಲಿ ಐಗೇಟ್ ಪಟ್ನಿ (ಈಗ ಕ್ಯಾಪ್ಜೆಮಿನಿ) ಯೊಂದಿಗೆ ಕೆಲಸ ಮಾಡಿದ್ದಾರೆ.
ಶ್ರೀ. ಅಮಿತ್ ಸಿನ್ಹಾ ಅವರು ದ ವಾರ್ಟನ್ ಸ್ಕೂಲ್, ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ಡ್ಯೂಯಲ್ ಎಂಬಿಎ ಪಡೆದಿದ್ದಾರೆ, ಫೈನಾನ್ಸ್ ಮತ್ತು ಸ್ಟ್ರಾಟಜಿಯಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ ಮತ್ತು ಅಲ್ಲಿ ಇವರು ಪಾಮರ್ ಸ್ಕಾಲರ್ ಆಗಿದ್ದು ಸೈಬೆಲ್ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ. ರಾಂಚಿಯ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಿಂದ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) ಮಾಡಿದ್ದಾರೆ. ಶ್ರೀ ಅಮಿತ್ ಸಿನ್ಹಾ ಅವರು ಇಂಡಿಯಾ ಲೀಡರ್ಶಿಪ್ ಫೆಲೋಶಿಫ್ ಕಾರ್ಯಕ್ರಮದ ಭಾಗವಾಗಿ ಅನಂತ ಆಸ್ಪೆನ್ ಫೆಲೋ ಸಹ ಆಗಿದ್ದಾರೆ.
ಶ್ರಿ. ರಮೇಶ್ ಅಯ್ಯರ್ 30 ಎಪ್ರಿಲ್ 2001 ರಿಂದ ಕಂಪೆನಿಯ ವ್ಯವಸ್ಥಾಪಕ ಡೈರೆಕ್ಟರಾಗಿ ನೇಮಕಗೊಂಡಿದ್ದಾರೆ. ಅದಲ್ಲದೆ ಆರಂಭದಿಂದಲೂ ಇವರು ನಮ್ಮೊಂದಿಗೆ ಸಂಬಂಧವಿಟ್ಟು ಕೊಂಡಿದ್ದಾರೆ. ಇವರು ವ್ಯಾಪಾರ ಅಭಿವೃದ್ಧಿ, ಫೈನಾನ್ಸ್ ಹಾಗೂ ಮಾರ್ಕೇಟಿಂಗ್ ವಿಷಯದಲ್ಲಿ ಆಳವಾದ ಅನುಭವ ಹೊಂದಿದ್ದಾರೆ. ಮಿ. ಅಯ್ಯರ್ ಎಂ. ಆಂಡ್ ಎಂ. ಹೊಲ್ಡಿಂಗ್ ಕಂಪೆನಿಯ ಗ್ರೂಪ್ ಎಕ್ಸಿಕ್ಯೂಟಿವ್ ಬೋರ್ಡ್ ಹಾಗೂ ಮಹಿಂದ್ರಾ ಗ್ರೂಪ್ ಕಂಪೆನಿಯ ವಿವಿಧ ಬೋರ್ಡ್ ನ ಸದಸ್ಯರಾಗಿದ್ದಾರೆ. ಇವರು ವಾಣಿಜ್ಯ(ಕಾಮರ್ಸ್ ನಲ್ಲಿ) ದಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ(ಬಿಸಿನೆಸ್ ಎಡ್ಮಿನಿಸ್ಟ್ರೇಶನ್ ನಲ್ಲಿ)ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಶ್ರೀ ಅಯ್ಯರ್ ಬಾಂಬೆ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಬ್ಯಾಂಕಿಂಗ್ ಮತ್ತು ಹಣಕಾಸು ಸಮಿತಿಯ ಸದಸ್ಯರಾಗಿದ್ದಾರೆ, ಹಣಕಾಸು ಕೈಗಾರಿಕಾ ಅಭಿವೃದ್ಧಿ ಮಂಡಳಿಯ (ಎಫ್ಐಡಿಸಿ) ಕೋರ್ ಸಮಿತಿ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್ಐಸಿಸಿಐ) ಫೆಡರೇಶನ್ನ ಎನ್ಬಿಎಫ್ಸಿಗಳ ಟಾಕ್ಸ್ ಫೋರ್ಸ್ ಆಗಿದ್ದರು. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು (ಸಿಯಾಮ್) ಸ್ಥಾಪಿಸಿದ ಆರ್ಥಿಕ ವ್ಯವಹಾರಗಳ ಪರಿಷತ್ತಿನ ಫೈನಾನ್ಸ್ ಮತ್ತು ಲೀಸಿಂಗ್ ಹಾಗೂ ವಿಮೆ ಕುರಿತು ಸಮೂಹದ ಸಹ-ಅಧ್ಯಕ್ಷರಾಗಿದ್ದಾರೆ.
ಶ್ರೀ ಅಯ್ಯರು ಹಲವು ಪ್ರಶಸ್ತಿ- ಪುರಸ್ಕಾರಗಳನ್ನು ಪಡೆದ ಒಬ್ಬ ಪ್ರಖ್ಯಾತ ವೃತ್ತಿಪರರಾಗಿದ್ದಾರೆ. ಭಾರತೀಯ ಸಾಧಕರ ವೇದಿಕೆಯಿಂದ ಕಾರ್ಪೋರೇಟ್ ನ್ಯಾಯಕತ್ವಕ್ಕಾಗಿ ಭಾರತೀಯ ಸಾಧಕರ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದಾರೆ. ನವದೆಹಲಿಯ 'ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಸ್ಟಡೀಸ್' ನಿಂದ ಬಿಸಿನೆಸ್ ಲೀಡರ್ ಶೀಪ್ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಅವರ ನಾಯಕತ್ವವನ್ನು ಸಿಎಮ್ಒ ಏಷ್ಯಾದ ಎಂಪ್ಲಾಯರ್ ಬ್ರ್ಯಾಂಡಿಂಗ್ ಇನ್ಸ್ಟಿಟ್ಯೂಟ್ ನೀಡಿದ ‘ಸಿಇಒ' ವಿದ್ ಎಚ್ಆರ್ ಓರಿಯಂಟೇಶನ್’ ಪ್ರಶಸ್ತಿಯನ್ನು ಅವರ ಸ್ಟ್ರೇಜಿಕ್ ಪಾರ್ಟನರ್ ಸಿಎಮ್ಒ ಕೌನ್ಸಿಲ್ನೊಂದಿಗೆ ಶ್ಲಾಘಿಸಲಾಗಿದೆ. ಇದಲ್ಲದೆ, ಅವರು ನವದೆಹಲಿಯ ಆರ್ಥಿಕ ಅಧ್ಯಯನ ಸಂಸ್ಥೆಯ ಉದ್ಯೋಗ್ ರತನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ, ಪುಣೆಯ ಕೌನ್ಸಿಲ್ ಫಾರ್ ಎಕನಾಮಿಕ್ ಗ್ರೋತ್ ಹಾಗೂ ರಿಸರ್ಚ್ ನಿಂದ ರಾಷ್ಟ್ರದ ರಾಷ್ಟ್ರೀಯ ಉದ್ಯೋಗ್ ಪ್ರತಿಭಾ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಮತ್ತು ಮುಂಬಯಿಯ ರಾಷ್ಟ್ರೀಯ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಭಾರತೀಯ ಉದ್ಯೋಗ ರತ್ನ ಪ್ರಶಸ್ತಿ, ಇವೀಷ್ಟೆ ಅಲ್ಲದೆ ;
ಶ್ರೀ ರಮೇಶ್ ಅಯ್ಯರ್ ಅವರು ಬಿಸಿನೆಸ್ ವರ್ಲ್ಡ್ ನ ಭಾರತದ ಅತ್ಯಂತ 'ಮೌಲ್ಯಯುತ' ಸಿಇಒಗಳ ಬಗೆಗಿನ ವಿಶೇಷ ಸುದ್ದಿಯಲ್ಲಿಯು ಕಾಣಿಸಿಕೊಂಡಿದ್ದಾರೆ. ಇವರು ಮಧ್ಯಮ ಗಾತ್ರದ (Mid sized) ಕಂಪೆನಿಗಳ ಲೀಸ್ಟ್ ನಲ್ಲಿ 65 ರಲ್ಲಿ 5ನೇ ಸ್ಥಾನವನ್ನು ಪಡೆದಿದ್ದಾರೆ.(ಆದಾಯ ರೂ. 1000 ದಿಂದ 3000 ಕೋಟಿ) ಮತ್ತು ಅದರ ಒಂದು ವರ್ಷದ ಸಾಧನೆಯ ಆಧಾರದ ಮೇಲೆ ಅದೇ ವಿಭಾಗದಲ್ಲಿ 65 ರಲ್ಲಿ 6ನೇ ಸ್ಥಾನವನ್ನು ಪಡೆದಿದ್ದಾರೆ. ಅದಲ್ಲದೆ ಕಂಪೆನಿಯ 5 ವರ್ಷದ ಸಾಧನೆಯಲ್ಲಿ 100 ರಲ್ಲಿ 20ನೇ ಸ್ಥಾನವನ್ನು ಪಡೆದಿದ್ದು ಫೈನಾನ್ಶಿಯಲ್ ಸೆಕ್ಟರ್ ನಲ್ಲಿ 12 ರಲ್ಲಿ 3 ನೆ ರಾಂಕ್ ನ್ನು ಪಡೆದುಕೊಂಡಿದ್ದಾರೆ.
ಅಮಿತ್ ರಾಜೆಯವರು ಪ್ರಸ್ತುತ ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ನ ಪೂರ್ಣ ಕಾಲಿಕ ನಿರ್ದೇಶಕರಾಗಿದ್ದು, "ಮುಖ್ಯ ಕಾರ್ಯಾಚರಣೆ ಅಧಿಕಾರಿ ಡಿಜಿಟಲ್ ಫೈನಾನ್ಸ್ – ಡಿಜಿಟಲ್ ಬಿಸಿನೆಸ್ ಯೂನಿಟ್" ಎಂಬ ಹುದ್ದೆಗೆ ನೇಮಕ ಹೊಂದಿದ್ದಾರೆ. ಇಸವಿ 2020ರ ಜುಲೈ ತಿಂಗಳಿನಲ್ಲಿ ಅಮಿತ್ ಅವರು ಮಹೀಂದ್ರಾ ಗ್ರೂಪ್ಗೆ ಪಾಲುದಾರಿಕೆಗಳು ಮತ್ತು ಮೈತ್ರಿಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಸೇರಿಕೊಂಡರು ಮತ್ತು ಎಂ&ಎ ಹಾಗೂ ಇನ್ವೆಸ್ಟರ್ ರಿಲೇಶನ್ಸ್ ಅನ್ನು ಮುನ್ನಡಿಸುವ ಜವಾಬ್ದಾರಿಯನ್ನು ಹೊತ್ತಿದ್ದರು. ಮಹೀಂದ್ರಾ ಗ್ರೂಪ್ಗೆ ಸೇರಿಕೊಳ್ಳುವ ಮೊದಲು ಅಮಿತ್ ಅವರು ಗೋಲ್ಡ್ಮನ್ ಸ್ಯಾಚ್ಸ್ನ ಪ್ರಧಾನ ಹೂಡಿಕೆ ಕ್ಷೇತ್ರದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಅವರು ನಾವೆಲ್ಟೆಕ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್, ಗುಡ್ ಹೋಸ್ಟ್ ಸ್ಪೇಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಮಂಡಳಿಗಳಲ್ಲಿ ಗೋಲ್ಡ್ಮನ್ ಸ್ಯಾಚ್ಸ್ನ ನಾಮಿನಿ ಡೈರೆಕ್ಟರ್ ಆಗಿದ್ದರು. ಅಮಿತ್ ಅವರಿಗೆ ಕಾರ್ಪೊರೇಟ್ ಫೈನಾನ್ಸ್, ವಿಲೀನಗಳು ಮತ್ತು ಸ್ವಾಧೀನಗಳು ಮತ್ತು ಪ್ರೈವೈಟ್ ಇಕ್ವಿಟಿಯಲ್ಲಿ ಒಟ್ಟು 20 ಕ್ಕಿಂತಲೂ ಹೆಚ್ಚು ವರ್ಷಗಳ ಅನುಭವವಿದೆ. ಗೋಲ್ಡ್ಮನ್ ಸ್ಯಾಚ್ಸ್ ಜೊತೆ ಕೆಲಸ ಮಾಡುವುದಕ್ಕೆ ಮೊದಲು ಅಮಿತ್ ಅವರು ಕೊಟಕ್ ಮಹೀಂದ್ರಾ ಬ್ಯಾಂಕಿನ ಪರ್ಯಾಯ ಆಸ್ತಿ ವಿಭಾಗವಾಗಿರುವ ಕೊಟಕ್ ಇನ್ವೆಸ್ಟ್ಮೆಂಟ್ ಅಡ್ವೈಸರ್ಸ್ ಲಿಮಿಟೆಡ್ ಜೊತೆಗೆ ಮತ್ತು ಡೆಲಾಯ್ಟ್ ಅಂಡ್ ಕೊ ನಲ್ಲಿ ವಹಿವಾಟು ಸಲಹಾ ಸೇವೆಗಳಲ್ಲಿ ಕೆಲಸ ಮಾಡಿದ್ದರು. ಅಮಿತ್ ಅವರು ಮುಂಬೈ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಮತ್ತು ಲಂಡನ್ ಬಿಸಿನೆಸ್ ಸ್ಕೂಲ್ನಿಂದ ಎಂಬಿಎ ಜೊತೆಗೆ ಫೈನಾನ್ಸ್ ಅಂಡ್ ಪ್ರೈವೇಟ್ ಇಕ್ವಿಟಿಯಲ್ಲಿ ಪಾಂಡಿತ್ಯವನ್ನು ಪಡೆದಿದ್ದಾರೆ.
ವಿವೇಕ್ ಅವರು ಒಬ್ಬ ಚಾರ್ಟರ್ಡ್ ಅಕೌಂಟೆಂಟ್ (1994), ಕಾಸ್ಟ್ ಅಕೌಂಟೆಂಟ್ ಆಗಿದ್ದು (1993) ಮತ್ತು ಬಾಂಬೆ ವಿಶ್ವವಿದ್ಯಾಲಯದಿಂದ ಬಿ.ಕಾಂ. (1991) ಪದವಿಯನ್ನು ಪಡೆದಿದ್ದಾರೆ. ಇವರು ವಿವಿಧ ಕ್ಷೇತ್ರಗಳಲ್ಲಿ ಅಂದರೆ ಗ್ರಾಹಕರ ಸರಕುಗಳು, P&G ಯಲ್ಲಿ ಕೆಲಸ ಮಾಡುತ್ತಿದ್ದ ಕಾಲಾವಧಿಗಳಲ್ಲಿ ಐಟಿ ಕನ್ಸಲ್ಟಿಂಗ್ ಮತ್ತು ಪ್ರೊಜೆಕ್ಟ್ ಫೈನಾನ್ಸ್, ಸೀಮೆನ್ಸ್ ಇನ್ಫರ್ಮೇಷನ್ ಸಿಸ್ಟಮ್ ಮತ್ತು ಐಸಿಐಸಿಐ (ICICI)ನಲ್ಲಿ 25 ವರ್ಷಗಳಿಗಿಂತಲೂ ಹೆಚ್ಚಿನ ಅಪಾರ ಅನುಭವವನ್ನು ಹೊಂದಿದ್ದಾರೆ.
ಮಹೀಂದ್ರಾ ಫೈನಾನ್ಸ್ಗೆ ಸೇರುವ ಮೊದಲು, ಸುಮಾರು 20 ವರ್ಷಗಳವರೆಗೆ ಇವರು, ಪಟ್ಟಿಮಾಡಲಾಗಿರುವ ಎಫ್ಎಂಸಿಜಿ (FMCG) ಕಂಪೆನಿಯಾದ ಮ್ಯಾರಿಕೋ ಲಿಮಿಟೆಡ್ ಜೊತೆ ಕೆಲಸ ಮಾಡುತ್ತಿದ್ದರು. ಮ್ಯಾರಿಕೋದ ಗ್ರೂಪ್ ಸಿಎಫ್ಒ (CFO) ಆಗಿ ಸೇವೆ ಸಲ್ಲಿಸಿದ ತಮ್ಮ ಕೊನೆಯ ಪಾತ್ರದಲ್ಲಿ ಇವರು, ವ್ಯವಹಾರ ಹಣಕಾಸು ಮತ್ತು ವಾಣಿಜ್ಯ, ಖಜಾನೆ ಮತ್ತು ವಿಮೆ, ಹೂಡಿಕೆದಾರರ ಸಂಬಂಧಗಳು, ಆಂತರಿಕ ಲೆಕ್ಕಪರಿಶೋಧನೆ ಮತ್ತು ಆಡಳಿತ, ಅಪಾಯ ಮತ್ತು ಅನುಸರಣೆ (GRC), ಅಕೌಂಟಿಂಗ್ ಮತ್ತು ವೇತನದಾರರ ಪಟ್ಟಿ, ಟ್ಯಾಕ್ಸೇಷನ್ ಮತ್ತು M&A ಮುಂತಾದ ವಿವಿಧ ಕಾರ್ಯಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ವಿವೇಕ್ ಅವರು ಎಫ್ಐಸಿಸಿಐ (FICCI)ನ ಕಾರ್ಪೊರೇಟ್ ಫೈನಾನ್ಸ್ ಕಮಿಟಿಯ ಒಬ್ಬ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಎಫ್ಐಸಿಸಿಐನ ಸಿಎಫ್ಒ ಕಾನ್ಕ್ಲೇವ್ನ ಒಬ್ಬ ಸದಸ್ಯರಾಗಿದ್ದಾರೆ.
ಶ್ರಿ. ಅನುಜ್ ಮೆಹ್ರಾ ಅವರು ಮಹಿಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಂ.ಆರ್.ಎಚ್.ಎಫ್.ಎಲ್) ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ, ಇದು ಹೌಸಿಂಗ್ ಫೈನಾನ್ಸ್ ಸಾಲದ ವ್ಯವಹಾರವನ್ನು ಹೊಂದಿದೆ. ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ಉತ್ತಮ ಅನುಭವ ಮತ್ತು ಹಣಕಾಸು ಸೇವಾ ವಲಯದಲ್ಲಿ 16 ವರ್ಷಗಳ ಅನುಭವ ಹೊಂದಿರುವ ಶ್ರಿ. ಮೆಹ್ರಾ ಅವರು ಮಹಿಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ನೊಂದಿಗೆ 2007 ರಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.
ಇವರು ದೆಹಲಿ ವಿಶ್ವವಿದ್ಯಾಲಯದಿಂದ(ಅರ್ಥಶಾಸ್ತ್ರ)ದಲ್ಲಿ ಬಿ ಎ ಪದವಿಯನ್ನು ಪಡೆದಿದ್ದಾರೆ. ಶ್ರಿ. ಮೆಹ್ರಾ ಅವರು 1982 ರಲ್ಲಿ ಅಹಮದಾಬಾದ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಅಖಿಲ ಭಾರತ ಮಾರಾಟವಾಗಿ ಅಧಿಕಾರವಹಿಸಿಕೊಳ್ಳುವ ಮೊದಲು ಸುಮಾರು 7 ವರ್ಷಗಳ ಕಾಲ ಅವರು ತಮ್ಮ ವೃತ್ತಿಜೀವನವನ್ನು ಲಕ್ಮೆ ಲಿಮಿಟೆಡ್ (ಮಾರಾಟ ಮತ್ತು ಮಾರ್ಕೆಟಿಂಗ್)ನಲ್ಲಿ ಪ್ರಾರಂಭಿಸಿದರು. ಸ್ವಲ್ಪ ಸಮಯದವರೆಗೆ ಲಕ್ಮೆ ಲಿಮಿಟೆಡ್ನ ಔಷಧೀಯ ವಿಭಾಗದ ವ್ಯವಸ್ಥಾಪಕರಾಗಿದ್ದರು, ಐಟಿಸಿ ಕ್ಲಾಸಿಕ್ ಫೈನಾನ್ಸ್ ಲಿಮಿಟೆಡ್ಗೆ ಸೇರಿದಾಗ ಅವರು ಹಣಕಾಸು ಸೇವೆಗಳ ಕ್ಷೇತ್ರಕ್ಕೆ ಪ್ರವೇಶ ಪಡೆದರು, ಅಲ್ಲಿ ಅವರು ಕಂಪನಿಯೊಂದಿಗೆ ಅಧಿಕಾರಾವಧಿಯಲ್ಲಿ ಪ್ರಾದೇಶಿಕ ವ್ಯವಸ್ಥಾಪಕ, ಜನರಲ್ ಮ್ಯಾನೇಜರ್ (ಪಶ್ಚಿಮ ವಲಯದಲ್ಲಿ) ಮತ್ತು ಸಹಾಯಕ ಉಪಾಧ್ಯಕ್ಷರಾಗಿ ಕೆಲಸ ಮಾಡಿದರು. ಅವರು 20th ಸೆಂಚುರಿ ಫೈನಾನ್ಸ್ ಕಾರ್ಪೊರೇಶನ್ನಲ್ಲಿ ಉಪಾಧ್ಯಕ್ಷರಾಗಿ ಮತ್ತು ಸೆಂಚುರಿಯನ್ ಬ್ಯಾಂಕ್ ಲಿಮಿಟೆಡ್ನಲ್ಲಿಯೂ ಕೆಲಸ ಮಾಡಿದ್ದಾರೆ, ಅಲ್ಲಿ ಅವರು ಹಲವಾರು ಚಾಲೆಂಜಿಂಗ್ ಉದ್ಯೋಗ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ನಂತರ ಅವರು ಮಹಿಂದ್ರಾ ಗೆಸ್ಕೊ ಡೆವಲಪರ್ಸ್ ಲಿಮಿಟೆಡ್ಗೆ ಸೇರಿದರು, ಅಲ್ಲಿ ಅವರು ತಮ್ಮ ಮಾರ್ಕೆಟಿಂಗ್ ಪೋರ್ಟ್ ಫೊಲಿಯೊವನ್ನು ನಿರ್ವಹಿಸಿದರು.
ಶ್ರೀ. ಅಶುತೋಷ್ ಬಿಶ್ನೊಯ್ ಅವರು ಭಾರತದಲ್ಲಿನ ಕನ್ಯೂಮರ್ ಮಾರ್ಕೆಟಿಂಗ್ ಅಂಡ್ ಫೈನಾನ್ಷಿಯಲ್ ಸರ್ವಿಸ್ ವ್ಯವಹಾರದಲ್ಲಿ 36ಕ್ಕಿಂತಲೂ ಹೆಚ್ಚು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಮ್ಯೂಚುವಲ್ ಫಂಡ್ ವ್ಯವಹಾರದಲ್ಲಿ ಅವರು ನಿರ್ವಹಿಸಿದ ಹಿರಿಯ ಪಾತ್ರಗಳಲ್ಲಿ, ಡಿಎಸ್ಪಿ ಮೆರಿಲ್ ಲಿಂಚ್ ಆ್ಯಸೆಟ್ ಮ್ಯಾನೇಜ್ಮೆಂಟ್ ಲಿಮಿಟೆಡ್ನ ಚೀಫ್ ಮಾರ್ಕೆಟಿಂಗ್ ಆಫೀಸರ್, ಜೆಎಮ್ ಮ್ಯೂಚುವಲ್ ಫಂಡ್ನ ಪ್ರೆಸಿಡೆಂಟ್ ಅಂಡ್ ಸಿಇಒ, ಎಕ್ಸಿಕುಟೀವ್ ಡೈರೆಕ್ಟರ್ ಆಫ್ ಯುಟಿಐ ಮ್ಯೂಚುವಲ್ ಫಂಡ್ ಅಂಡ್ ಅಂಡ್ ಆ್ಯಕ್ಟಿಂಗ್-ಸಿಇಒ ಆಫ್ ಎಲ್&ಟಿ ಮ್ಯೂಚುವಲ್ ಫಂಡ್ ಇವು ಒಳಗೂಡಿವೆ. ಗ್ರಾಹಕರ ಮಾರ್ಕೆಟಿಂಗ್ನಲ್ಲಿ ಅವರ ಕೆಲಸಗಳಲ್ಲಿ ಗಮನಾರ್ಹವಾದವುಗಳು ಯಾವುವೆಂದರೆ, ಜೆ. ವಾಲ್ಟರ್ ಥಾಂಪ್ಸನ್ ಇಂಡಿಯಾದಲ್ಲಿ ಬ್ರ್ಯಾಂಡ್ ಪ್ಲಾನಿಂಗ್ ಡೈರೆಕ್ಟರ್ ಮತ್ತು ಹೆಡ್ ಆಫ್ ಬಿಸ್ನೆಸ್ ಡೆವಲಪ್ಮೆಂಟ್ ಆಗಿ ಅಧಿಕಾರ ವಹಿಸಿದ್ದು ಮತ್ತು ಭಾರತದಲ್ಲಿ ರೀಡರ್ಸ್ ಡೈಜೆಸ್ಟ್ ಪತ್ರಿಕೆಯ ಮತ್ತು ಪುಸ್ತಕಗಳ ಪ್ರಕಾಶಕರಾಗಿ ಸೇವೆಸಲ್ಲಿಸಿದ್ದಾಗಿದೆ.
ಶ್ರೀ. ಅಶುತೋಷ್ ಬಿಶ್ನೊಯ್ ಅವರು ಎನ್ಐಎಸ್ಎಂ ಕಮಿಟಿ ಫಾರ್ ಎಂಪಾನಲ್ಮೆಂಟ್ ಅಫ್ ರಿಸೋರ್ಸ್ ಪರ್ಸನ್ಸ್ ಅಂಡ್ ದ ಎನ್ಐಎಸ್ಎಂ ಕಮಿಟಿ ಫಾರ್ ಕಂಟಿನ್ಯೂಯಿಂಗ್ ಎಜುಕೇಶನ್ನ ಸದಸ್ಯರಾಗಿದ್ದಾರೆ. ಅವರು ಪುಣೆಯ ಸಿಂಬಿಯೋಸಿಸ್ ಇನ್ಸ್ಟಿಟ್ಯೂಟ್ ಆಫ್ ಬಿಸ್ನೆಸ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎಗಾಗಿ ಮತ್ತು ಬೋಸ್ಟನ್ನ ಹಾರ್ವರ್ಡ್ ಬಿಸ್ನೆಸ್ ಸ್ಕೂಲ್ನಲ್ಲಿ ಮಹೀಂದ್ರಾ ಯೂನಿವರ್ಸ್ ಪ್ರೋಗ್ರಾಮ್ಗಾಗಿ ಅಧ್ಯಯನ ಮಾಡಿದರು. ಶ್ರೀ. ಬಿಶ್ನೊಯ್ ಅವರು ಹಿಂದಿನ ಹಿಂದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ಯಾಪಿಟಲ್ ಮಾರ್ಕೆಟ್ಸ್ ನಲ್ಲಿ ಸಂದರ್ಶಕ ಅಧ್ಯಾಪಕರಾಗಿದ್ದರು ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯುರಿಟೀಸ್ ಮಾರ್ಕೆಟ್ ಅನ್ನು ಸ್ಥಾಪಿಸುವುದರಲ್ಲಿ ಬಹಳವಾಗಿ ತೊಡಗಿಸಿಕೊಂಡಿದ್ದರು. ಅವರು ಎಎಂಎಫ್ಐ ಮಂಡಳಿ, ಮ್ಯೂಚುವಲ್ ಫಂಡ್ಗಳ ಸಂಘ ಮತ್ತು ಹೂಡಿಕೆದಾರರ ಜಾಗೃತಿಗಾಗಿರುವ ಅದರ ಸಮಿತಿಯ ಸದಸ್ಯರಾಗಿದ್ದಾರೆ.
ಶ್ರಿ. ರಜನೀಶ್ ಅಗರ್ ವಾಲ್ ಅವರು ಲಕ್ನೋ ವಿಶ್ವವಿದ್ಯಾಲಯದಿಂದ ವಿಜ್ಞಾನದಲ್ಲಿ ಪದವೀಧರರಾಗಿದ್ದಾರೆ ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ನಿರ್ವಹಣಾ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಸ್ಟೀರಿಂಗ್ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಮಹಿಂದ್ರಾ ಬಿಸಿನೆಸ್ ಆಂಡ್ ಕನ್ಸಲ್ಟಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ನಿರ್ದೇಶಕರಾಗಿದ್ದಾರೆ. ಅವರು ರಿಟೇಲ್ ಕ್ರೆಡಿಟ್ ಆಟೋ ಲೋನ್ಸ್, ಆಸೆಟ್ ರಿಸ್ಕ್ ಮ್ಯಾನೆಜ್ಮೆಂಟ್, ರೂರಲ್ ಮೆನೆಜ್ಮೆಂಟ್ ಮತ್ತು ಪ್ರೊಡಕ್ಟ್ ಡೆವಲಪ್ಮೆಂಟ್ ಚಾನೆಲ್ ಮತ್ತು ಸಂಬಂಧ ನಿರ್ವಹಣೆಯಲ್ಲಿ 21 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ - ಬೆಂಗಳೂರು ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ - ಕಲ್ಕತ್ತಾದಂತಹ ಸಾಮಾನ್ಯ ಸಂಸ್ಥೆಗಳಿಂದ ಜನರಲ್ ಮ್ಯಾನೇಜ್ಮೆಂಟ್ ಮತ್ತು ಬಿಸಿನೆಸ್ ಲೀಡರ್ಶಿಪ್ನಲ್ಲಿ ಅಲ್ಪಾವಧಿಯ ಕೋರ್ಸ್ಗಳನ್ನು ಮಾಡಿದ್ದಾರೆ.
ಶ್ರಿ. ಬಾಲಾಜಿ ಅವರು ನಿರ್ವಹಣಾ ವೃತ್ತಿಪರರಾಗಿದ್ದು, ತಂತ್ರ, ಮಾರ್ಕೆಟಿಂಗ್ ಮತ್ತು ಸೇಲ್ಸ್ ಮುಂತಾದ ವಲಯಗಳಲ್ಲಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಶ್ರಿ. ಬಾಲಾಜಿ ಅವರು 2008 ರಿಂದ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದು, ವಿವಿಧ ಚಾಲೇಂಜಿಂಗ್ ಯೋಜನೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ.
ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬ್ಯಾಚುಲರ್ ಆಫ್ ಟೆಕ್ನಾಲಜಿ (ಬಿ.ಟೆಕ್) ಪದವಿ ಪಡೆದ ಶ್ರಿ. ಬಾಲಾಜಿಯವರು, ಕಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು, ಮಾರ್ಕೆಟಿಂಗ್ ಮತ್ತು ಫೈನಾನ್ಸ್ನಲ್ಲಿ ಪರಿಣತಿಯನ್ನು ಪಡೆದರು.
ಇದಕ್ಕೂ ಮೊದಲು, ಶ್ರಿ. ಬಾಲಾಜಿ ಮಹಿಂದ್ರಾ ಮತ್ತು ಮಹಿಂದ್ರಾ ಲಿಮಿಟೆಡ್ನಲ್ಲಿ ಕಾರ್ಪೊರೇಟ್ ಸ್ಟ್ರಾಟಜಿ ಜನರಲ್ ಮ್ಯಾನೇಜರ್ ಆಗಿದ್ದರು. ಅವರು ನೆಸ್ಲೆ ಕಂಪೆನಿಯೊಂದಿಗೆ ಬ್ರಾಂಡ್ ಫ್ರ್ಯಾಂಚೈಸ್ ಮ್ಯಾನೇಜರ್ ಆಗಿ ಮತ್ತು ಅಗ್ರೊ ಟೆಕ್ ಫುಡ್ಸ್ ನಲ್ಲಿ ಹಿರಿಯ ಬ್ರಾಂಡ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.
ಮೋಹಿತ್ ಅವರು ಗ್ರೂಪ್ನ ವ್ಯವಹಾರಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ಮತ್ತು ಹೊಸ ವ್ಯವಹಾರ ಮಾದರಿಗಳನ್ನು ರಚಿಸಲು ನವೀನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಸದುಪಯೋಗಿಸುವ ಮೂಲಕ ಮತ್ತು ವೈವಿಧ್ಯಮಯ ಕಂಪೆನಿಗಳಾದ್ಯಂತ ಗ್ರಾಹಕರ ಅನುಭವಗಳನ್ನು ಪರಿವರ್ತಿಸುವ ಮೂಲಕ ಗ್ರೂಪ್ನ ಮಹತ್ವಾಕಾಂಕ್ಷೆಯ ತಂತ್ರಜ್ಞಾನ ಪರಿವರ್ತನೆ ಕಾರ್ಯಕಲಾಪವನ್ನು ಮುನ್ನಡೆಸಲು ಜವಾಬ್ದಾರರಾಗಿದ್ದಾರೆ.
ಮೋಹಿತ್ ಅವರು 2020ರ ಅಕ್ಟೋಬರ್ ತಿಂಗಳಿನಲ್ಲಿ DBS ಬ್ಯಾಂಕಿನಿಂದ ಮಹೀಂದ್ರಾ ಗ್ರೂಪ್ಗೆ ಸೇರಿಕೊಂಡರು, ಅಲ್ಲಿ ಅವರು ಟೆಕ್ನಾಲಜಿ ಆಪ್ಟಿಮೈಸೇಶನ್ ಮುಖ್ಯಸ್ಥರಾಗಿದ್ದರು ಮತ್ತು ಸಿಂಗಾಪುರದ ಹೊರಗಿನ ಬ್ಯಾಂಕಿನ ಮೊದಲ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವಾದ ಹೈದರಾಬಾದ್ನಲ್ಲಿ ಏಷ್ಯಾಹಬ್ನ ಮುಖ್ಯಸ್ಥರಾಗಿದ್ದರು. ಇತರ ಅಭೇದ್ಯವಾದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮೊಬೈಲ್, ಡೇಟಾ, ಎಐ ಮತ್ತು ಕ್ಲೌಡ್ನಾದ್ಯಂತ ತಂತ್ರಜ್ಞಾನದ ಆವಿಷ್ಕಾರಗಳ ಮೇಲೆ ಕೇಂದ್ರೀಕರಿಸುವ ಮೂಲಕ ಡಿಜಿಟಲ್ ಬ್ಯಾಂಕಿಂಗ್ ಸಾಧ್ಯತೆಗಳ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರವನ್ನು ವಹಿಸಿದರು.
ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಉದ್ಯಮದಲ್ಲಿ ಕಳೆದ 17 ವರ್ಷಗಳನ್ನು ಕಳೆದಿರುವ ಮೋಹಿತ್ ಅವರು ತಂತ್ರಜ್ಞಾನ ಮತ್ತು ಕಾರ್ಯಾಚರಣೆಗಳ ಕ್ಷೇತ್ರದಲ್ಲಿ ಸುಮಾರು 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ.
DBSಗೆ ಸೇರುವ ಮೊದಲು ಅವರು ವಿಶ್ವದಾದ್ಯಂತ ಇರುವ ಬ್ಯಾಂಕ್ ಆಫ್ ಅಮೆರಿಕಾಸ್ ಜಾಗತಿಕ ವ್ಯಾಪಾರ ಸೇವಾ ಕೇಂದ್ರಗಳಿಗೆ ಚೀಫ್ ಟೆಕ್ನಾಲಜಿ ಆಫೀಸರ್ ಆಗಿದ್ದರು ಮತ್ತು ಅದಕ್ಕೆ ಮೊದಲು ಎಂಫಾಸಿಸ್ನ ಸಿಐಒ ಆಗಿದ್ದರು.
ಮೋಹಿತ್ ಅವರು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆಗಿದ್ದು, ಕಾರ್ನೆಲ್ ಮತ್ತು ಜಾರ್ಜಿಯಾ ಟೆಕ್ನಿಂದ ಮುಂದುವರಿದ ಮ್ಯಾನೇಜ್ಮೆಂಟ್ ಮತ್ತು ವೃತ್ತಿಪರ ಡಿಗ್ರಿಗಳನ್ನು ಪಡೆದಿದ್ದಾರೆ.
ಪ್ರೊಫೈಲ್: ಶ್ರೀ ವೇದನಾರಾಯಣನ್ ಶೇಷಾದ್ರಿಯವರು ಮಹೀಂದ್ರಾ ಫೈನಾನ್ಸ್ನ ಇನ್ಶೂರೆನ್ಸ್ ಬ್ರೋಕಿಂಗ್ ಅಂಗಸಂಸ್ಥೆಯಾದ ಮಹೀಂದ್ರಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪ್ರಧಾನ ಅಧಿಕಾರಿಯಾಗಿದ್ದಾರೆ. ಶ್ರೀ ವೇದನಾರಾಯಣನ್ ಅವರು 2021 ರ ಫೆಬ್ರವರಿ ತಿಂಗಳಿನಲ್ಲಿ ಮಹೀಂದ್ರಾ ಇನ್ಶೂರೆನ್ಸ್ ಬ್ರೋಕರ್ಸ್ ಲಿಮಿಟೆಡ್ಗೆ ಸೇರುವ ಮೊದಲು, ಚೋಳಮಂಡಲಂ ಎಂಎಸ್ ಜನರಲ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್ನ ಅಧ್ಯಕ್ಷರು ಮತ್ತು ಸಿಒಒ ಆಗಿದ್ದರು.
ಆಟೋಮೋಟಿವ್ ಸೇಲ್ಸ್ನಲ್ಲಿ ಐಷರ್ ಮೋಟಾರ್ಸ್ ಲಿಮಿಟೆಡ್ನೊಂದಿಗೆ ವೇದ ಅವರು ಒಟ್ಟು 28 ವರ್ಷಗಳ ಅನುಭವವಿರುವ ಮ್ಯಾನೇಜ್ಮೆಂಟ್ ವೃತ್ತಿಪರರಾಗಿದ್ದು, ಇವುಗಳಲ್ಲಿ 18 ವರ್ಷಗಳನ್ನು ಬಿಎಫ್ಎಸ್ಐ (BFSI) ಕ್ಷೇತ್ರದಲ್ಲಿ ಕಳೆದಿದ್ದು ರೀಟೈಲ್ ಬ್ಯಾಂಕಿಂಗ್, ಲೈಫ್ ಮತ್ತು ನಾನ್-ಲೈಫ್ ಇನ್ಶೂರೆನ್ಸ್ನಲ್ಲಿ ವಿವಿಧ ನಿಯೋಜನೆಗಳನ್ನು ನಿರ್ವಹಿಸಿದ್ದಾರೆ.
ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು, 2003 ರಲ್ಲಿ ಐಸಿಐಸಿಐ ಬ್ಯಾಂಕ್ಗೆ ಸೇರುವ ಮೊದಲು ಬಿಸ್ನೆಸ್ ಡೆವಲಪ್ಮೆಂಟ್ ಮತ್ತು ಇಂಟರ್ನಲ್ ಕನ್ಸಲ್ಟಿಂಗ್ ಪಾತ್ರಗಳಲ್ಲಿ BILT (ಬಲ್ಲಾರ್ಪುರ್ ಇಂಡಸ್ಟ್ರೀಸ್ ಲಿಮಿಟೆಡ್) ಕಂಪೆನಿಯೊಂದಿಗೆ ಕೆಲಸ ಮಾಡಿದರು. ರೀಟೈಲ್ ಬ್ಯಾಂಕಿನಲ್ಲಿ ಇವರು ರೀಟೈಲ್ ಹೊಣೆಗಾರಿಕೆಗಳು ಮತ್ತು ಆಸ್ತಿಗಳ ಕ್ಷೇತ್ರದಾದ್ಯಂತ ವಿಭಿನ್ನ ಪಾತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಅಡಮಾನ ವ್ಯವಹಾರದ ಉತ್ಪನ್ನ ಅಭಿವೃದ್ಧಿ ಮತ್ತು ಅಡ್ಡ-ಮಾರಾಟ ವಿಭಾಗದ ನಾಯಕತ್ವ ವಹಿಸಿದ್ದಾರೆ.
2007 ರಲ್ಲಿ ಇವರು ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂಪೆನಿಗೆ ಸ್ಥಳಾಂತರಿಸಿದರು ಮತ್ತು ಸ್ಟ್ರಾಟೆಜಿಕ್ ಪ್ಲ್ಯಾನಿಂಗ್, ಪಾರ್ಟ್ನರ್ಶಿಪ್ ಅಕ್ವಿಸಿಷನ್ ಕ್ಷೇತ್ರಗಳಲ್ಲಿ ಹಲವಾರು ಹಿರಿಯ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಟಾಟಾ ಎಐಎ ಲೈಫ್ಗಾಗಿ ಪೂರ್ವ ವಲಯದ (ಈಸ್ಟರ್ನ್ ಝೋನ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 2012 ರಲ್ಲಿ ವೇದ ಅವರು ಮುರುಗಪ್ಪ ಗ್ರೂಪ್, ಚೋಳ ಎಂಎಸ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ನ ನಾನ್ಲೈಫ್ ಕಂಪೆನಿಯಲ್ಲಿ ಪ್ರಮುಖ ಮಾರ್ಕೆಟಿಂಗ್ ಆಫೀಸರ್ ಆಗಿ ಸೇರಿಕೊಂಡರು. ಚೋಳ ಎಂಎಸ್ ಜೊತೆಗಿನ ತಮ್ಮ 8 ವರ್ಷದ ಸೇವಾ ಅವಧಿಯಲ್ಲಿ ಇವರು ಪ್ರಬಲವಾದ ರೀಟೈಲ್ ಫ್ರ್ಯಾಂಚೈಸ್ ಅನ್ನು ನಿರ್ಮಿಸಿದರು ಮತ್ತು 2020 ರಲ್ಲಿ ಅಧ್ಯಕ್ಷರು ಮತ್ತು ಸಿಒಒ ಅಧಿಕಾರ ಸ್ಥಾನವನ್ನು ವಹಿಸಿಕೊಳ್ಳುವ ಮೊದಲು ಹೆಲ್ತ್ ಇನ್ಶೂರೆನ್ಸ್ ಎಸ್ಬಿಯು ಅನ್ನು ಸ್ಥಾಪಿಸುವುದೂ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸಿದರು
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ವೇದ ಅವರು ಗುರ್ಗಾಂವ್ನ ಎಂಡಿಐ ಸಂಸ್ಥೆಯಲ್ಲಿ ಪಿಜಿಡಿಎಂ ಮಾಡಿದ್ದಾರೆ ಮತ್ತು ಫ್ರಾನ್ಸ್ನ ಐಎನ್ಎಸ್ಇಎಡಿ ಯಲ್ಲಿ ತಮ್ಮ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ (AMP) ಅನ್ನು ಸಹ ಪೂರ್ಣಗೊಳಿಸಿದ್ದಾರೆ.
ಅತುಲ್ ಅವರು ಮೂಲತಃ ಒಬ್ಬ ಎಂಜಿನಿಯರ್ ನಂತರ ಎಚ್ಆರ್ ಪ್ರೊಫೆಷನಲ್ ಆಗಿದ್ದಾರೆ ಮತ್ತು 28 ವರ್ಷಗಳಷ್ಟು ಕಾಲ ವ್ಯವಹಾರ ಮತ್ತು ಎಚ್ಆರ್ ಅನುಭವದಲ್ಲಿ ಚೆನ್ನಾಗಿ ಪಳಗಿರುವ ಇವರು ಜನನಾಯಕರಾಗಿದ್ದಾರೆ. ಈ ಅಪಾರ ಅನುಭವವು ಮಹೋನ್ನತ ರೀತಿಯಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಾಮರ್ಥ್ಯದ ಮೂಲಕ ಕಾರ್ಯತಂತ್ರದ ಚಿಂತನೆ ಮತ್ತು ಫಲಿತಾಂಶ ವಿತರಣೆಯ (ಸ್ಟ್ರಾಟೆಜಿಕ್ ಥಿಂಕಿಂಗ್ ಮತ್ತು ರಿಸಲ್ಟ್ ಡೆಲಿವರಿ) ಉತ್ತಮ ಸಮ್ಮಿಶ್ರಣವಾಗಿದೆ.
ಮಾನವ ಸಂಪನ್ಮೂಲದಲ್ಲಿ ಅವರು ಕಳೆದ 19 ವರ್ಷಗಳಲ್ಲಿ, ಮಹೀಂದ್ರಾ ಅಂಡ್ ಮಹೀಂದ್ರಾ (M&M) ಕಂಪೆನಿಯೊಳಗಿನ ವಿವಿಧ ವ್ಯವಹಾರಗಳಿಗೆ ಮಾನವ ಸಂಪನ್ಮೂಲ ಕಾರ್ಯಭಾರದ ನೇತೃತ್ವವನ್ನು ವಹಿಸಿದ್ದಾರೆ. ಇವುಗಳಲ್ಲಿ ಆಟೋಮೊಬೈಲ್ಸ್, ಟ್ರಕ್ಕುಗಳು ಮತ್ತು ಬಸ್ಸುಗಳು, ಟ್ರ್ಯಾಕ್ಟರ್ಗಳು, ಡಿಜಿ ಸೆಟ್ಗಳು, ನಿರ್ಮಾಣ ಉಪಕರಣಗಳು ಮತ್ತು ಕೃಷಿ ವ್ಯವಹಾರಕ್ಕಾಗಿರುವ ಎಚ್ಆರ್ ಜವಾಬ್ದಾರಿಯು ಸೇರಿದೆ. ಈ ಪ್ರಯಾಣದಲ್ಲಿ ಇವರು ಸ್ಟ್ರಾಟೆಜಿಕ್ ಮತ್ತು ಟ್ರಾನ್ಸ್ಫಾರ್ಮೇಷನಲ್ ಎಚ್ಆರ್ ಮ್ಯಾನೇಜ್ಮೆಂಟ್, ಸಂಸ್ಥೆ ವಿನ್ಯಾಸ, ಬದಲಾವಣೆ ಮ್ಯಾನೇಜ್ಮೆಂಟ್, ಟ್ಯಾಲೆಂಟ್ ಮ್ಯಾನೇಜ್ಮೆಂಟ್, ಒಡಿ., ಸಾಮರ್ಥ್ಯ ವೃದ್ಧಿ, ಎಂಪ್ಲಾಯಿ ಎಂಗೇಜ್ಮೆಂಟ್, ಎಚ್ಆರ್ ಹಂಚಿಕೆ ಸೇವೆಗಳು ಮತ್ತು ಪಿಎಂಎಸ್ ಅನ್ನು ನಿರ್ವಹಿಸಿದ್ದಾರೆ.
ಪ್ರಸ್ತುತ ಇವರು ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ನ ಎಚ್ಆರ್ ಹಾಗೂ ಆಡಳಿತ ನಿರ್ವಹಣೆಯ ಉಪಾಧ್ಯಕ್ಷರಾಗಿದ್ದಾರೆ. ಇದರ 20000 ಕ್ಕಿಂತ ಹೆಚ್ಚು ಉದ್ಯೋಗಿಗಳು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರು ಮಹೀಂದ್ರಾ ಗ್ರೂಪ್ನ ಫೈನಾನ್ಷಿಯಲ್ ಸರ್ವೀಸ್ ಸೆಕ್ಟರಿನ ಸ್ಟೀರಿಂಗ್ ಸಮಿತಿಯ ಒಬ್ಬ ಸದಸ್ಯರಾಗಿದ್ದಾರೆ.
ಇವರು ಇಂಟರ್ನ್ಯಾಷನಲ್ ಕೋಚ್ ಫೆಡರೇಶನ್ನ ಪ್ರೊಫೆಷನಲ್ ಸರ್ಟಿಫೈಡ್ ಕೋಚ್ (PCC) ಆಗಿದ್ದಾರೆ ಮತ್ತು ಎಂಬಿಟಿಐನಲ್ಲಿ ಸಹ ಸರ್ಟಿಫಿಕೇಷನ್ ಪಡೆದಿದ್ದಾರೆ.
ಇವರು ಜನರಿಗೆ ಕೋಚ್ ಮಾಡಲು ಅಂದರೆ ತರಬೇತಿ ನೀಡಲು ಮತ್ತು ಅವರನ್ನು ಬೆಳೆಸಿ ಸಮರ್ಥರನ್ನಾಗಿ ಮಾಡಲು ತುಂಬಾ ಇಷ್ಟಪಡುತ್ತಾರೆ.
Ruzbeh is the President – Group Human Resources & Communications since April 2020. He is also responsible for Corporate Social Responsibility and Corporate Services. He is a member of Mahindra’s Group Executive Board.
Ruzbeh joined the Mahindra Group in 2007, as Executive Vice President – Corporate Strategy, heading the Group's Strategy function. He became the Chief Brand Officer of the Group. During that time he spearheaded Mahindra's entry into racing and led the development of the Group's brand position and core purpose, 'Rise'. He then moved to head International Operations for the Automotive and Farm Equipment Sectors of M&M. Subsequentially he led Group Corporate Brand, PR and Communications, Ethics as well as Mahindra’s Racing team.
Ruzbeh joined the Mahindra Group in 2007, as Executive Vice President – Corporate Strategy, heading the Group's Strategy function. He became the Chief Brand Officer of the Group. During that time he spearheaded Mahindra's entry into racing and led the development of the Group's brand position and core purpose, 'Rise'. He then moved to head International Operations for the Automotive and Farm Equipment Sectors of M&M. Subsequentially he led Group Corporate Brand, PR and Communications, Ethics as well as Mahindra’s Racing team.
Post his Master's degree, Ruzbeh worked with Hindustan Lever and Unilever for close to 22 years, across geographies, in marketing, customer management and general management. This included stints as Marketing Manager – Home and Personal Care (with Unilever Central Asia), Regional Manager – Western India (with Hindustan Lever), Vice President – Customer Development (with Unilever’s Africa Regional Group), and Customer Development Director on the Board of Unilever Maghreb.
Email: [email protected]
Toll free number: 1800 233 1234(ಸೋಮವಾರ-ಭಾನುವಾರ, ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ)
(Except National Holidays)
WhatsApp number: 7066331234
ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ
© ಮಹಿಂದ್ರಾ ಫೈನಾನ್ಸ್
ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಎವಲ್ಯೂಷನ್ಕೊ
For illustration purpose only
Total Amount Payable
50000
This document has been prepared on the basis of publicly available information, internally developed data and other sources believed to be reliable. Mahindra & Mahindra Financial Services Ltd, ('MMFSL') does not warrant its completeness and accuracy. Whilst we are not soliciting any action based upon this information, all care has been taken to ensure that the facts are accurate and opinions given are fair and reasonable. This information is not intended as an offer or solicitation for the purchase or sale of any financial instrument receipt of this information should rely on their own investigations and take their own professional advice. Neither MMFSL nor any of its employees shall be liable for any direct, indirect, special, incidental, consequential, punitive or exemplary damages, including lost profits arising in any way from the information contained in this material.
MMFSL and its affiliates, officers, directors, and employees, including people involved in the preparation or issuance of this material, may vary from time to time, have long or short positions in, and buy or sell the securities thereof, of the company mentioned herein. MMFSL may at any time solicit or provide, credit, advisory or other services to the issuer of any security referred to herein. Accordingly, information may be available to MMFSL, which is not reflected in this material, and MMFSL may have acted upon or used the information prim to, or immediately following its publication.
Your form has been submitted successfully.
Our representative will get in touch with you shortly.